ಸೆ.20 : ಕೊಳೆರೋಗ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಅಂತಿಮ ದಿನ

Update: 2018-09-18 16:01 GMT

ಉಡುಪಿ, ಸೆ.18: ಗ್ರಾಮ ಪಂಚಾಯತ್, ಗ್ರಾಮ ಲೆಕ್ಕಿಗರ ಕಚೇರಿ ಹಾಗೂ ತೋಟಗಾರಿಕೆ ಇಲಾಖೆಯಲ್ಲಿ ಕೊಳೆರೋಗ ಪರಿಹಾರಕ್ಕಾಗಿ ಸೆ.7ರಿಂದ ಸಂತ್ರಸ್ಥ ರೈತರಿಂದ ಸ್ವೀಕರಿಸುತ್ತಿರುವ ಅರ್ಜಿಯನ್ನು ಸೆ.20ರವರೆಗೂ ಸ್ವೀಕರಿಸಲಾಗುತ್ತಿದೆ.

ವರದಿಯನ್ನು ಕ್ಲಪ್ತ ಸಮಯದಲ್ಲಿ ಸರಕಾರಕ್ಕೆ ನೀಡಬೇಕಾಗಿರುವುದರಿಂದ ಅರ್ಜಿ ಸ್ವೀಕರಿಸುವ ಪ್ರಕ್ರಿಯೆಯನ್ನು ಸೆ.20ಕ್ಕೆ ಅಂತಿಮಗೊಳಿಸಲಾಗುವುದು. ಆದುದರಿಂದ ರೈತರು ನಿಗದಿತ ಸಮಯದೊಳಗೆ ಅರ್ಜಿ ನೀಡಬೇಕೆಂದು ಉಡುಪಿಯ ಅಪರ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News