​ಕೊಡಪಾನ ತೆಗೆಯಲು ಬಾವಿಗೆ ಇಳಿದ ಯುವಕ ಮೃತ್ಯು

Update: 2018-09-18 16:09 GMT

ಬ್ರಹ್ಮಾವರ, ಸೆ.18: ಕೊಡಪಾನ ತೆಗೆಯಲು ಬಾವಿಗೆ ಇಳಿದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಹನೇಹಳ್ಳಿ ಗ್ರಾಮದ ಉದ್ದಾಲಗುಡ್ಡೆ ಎಂಬಲ್ಲಿ ಸೆ.17ರಂದು ಮಧ್ಯಾಹ್ನ ವೇಳೆ ನಡೆದಿದೆ.

ಮೃತರನ್ನು ಉದ್ದಾಲಗುಡ್ಡೆ ಮಾಸ್ತಿ ನಗರದ ಸುರೇಶ (32) ಎಂದು ಗುರುತಿಸಲಾಗಿದೆ. ರೋನಾಲ್ಡ್ ಡಿಸೋಜ ಎಂಬವರು ಸರಕಾರಿ ಬಾವಿಯಲ್ಲಿ ಬಿದ್ದ ಕೊಡಪಾನ ತೆಗೆಯಲು ಸುರೇಶ್‌ರನ್ನು ಬಾವಿಗೆ ಇಳಿಸಿದ್ದು, ಈ ವೇಳೆ ಸುರೇಶ್ ನೀರಿನಲ್ಲಿ ಮುಳುಗಿ ಮೃತಪಟ್ಟರೆನ್ನಲಾಗಿದೆ.

ರೋನಾಲ್ಡ್ ಡಿಸೋಜ ಯಾವುದೇ ಸುರಕ್ಷತಾ ಕ್ರಮ ವಹಿಸದೆ ನಿರ್ಲಕ್ಷ್ಯದಿಂದ ಸುರೇಶರನ್ನು ಬಾವಿಗೆ ಇಳಿಸಿದ್ದರಿಂದ ಈ ಅನಾಹುತ ಸಂಭವಿಸಿದೆ ಎಂದು ಮೃತರ ಸಹೋದರ ಸುನೀಲ್ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News