ಕಣಚೂರು ಮೋನುಗೆ ಬೆದರಿಕೆ ಕರೆ
Update: 2018-09-18 16:19 GMT
ಮಂಗಳೂರು, ಸೆ. 18: ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ, ಉದ್ಯಮಿ ಕಣಚೂರು ಮೋನು ಅವರಿಗೆ ಬೆದರಿಕೆ ಕರೆ ಹಾಕಿದ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶನಿವಾರ ವಿದೇಶದಿಂದ ಕರೆ ಮಾಡಿರುವ ಅಪರಿಚಿತ ವ್ಯಕ್ತಿಯೊಬ್ಬ ರವಿ ಪೂಜಾರಿ ಹೆಸರಲ್ಲಿ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಥಾಲ್ಯಾಂಡ್ ಮತ್ತು ಲಾವೋಸ್ನಿಂದ ನಿರಂತರ ಒಂಬತ್ತು ಅಪರಿಚಿತ ಕರೆಗಳು ಕಣಚೂರು ಮೋನುಗೆ ಬಂದಿವೆ. ಹಿಂದಿಯಲ್ಲಿ ಮಾತನಾಡಿರುವ ವ್ಯಕ್ತಿ ಕಣಚೂರು ಮೋನು ಅವರ ಹೆಸರು ಕೇಳಿ ತಾನು ರವಿ ಪೂಜಾರಿ ಮಾತನಾಡುತ್ತಿರುವುದು. ತಾನು ಹೇಳಿದಂತೆ ಕೇಳದಿದ್ದಲ್ಲಿ ತನ್ನ ಹುಡುಗರನ್ನು ಬಿಡಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.