ದುಷ್ಕರ್ಮಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಎಸ್‍ಡಿಪಿಐ ಮನವಿ

Update: 2018-09-20 13:56 GMT

ಬಂಟ್ವಾಳ, ಸೆ. 20: ಸಂತ್ರಸ್ಥೆಗೆ ನ್ಯಾಯ, ಭದ್ರತೆ ಹಾಗೂ ಸೂಕ್ತ ಪರಿಹಾರ ಒದಗಿಸುವಂತೆ ಮತ್ತು ದುಷ್ಕರ್ಮಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ತಾಲೂಕು ತಹಶೀಲ್ದಾರರಿಗೆ ಹಾಗೂ ಸಹಾಯಕ ಪೊಲೀಸ್ ಆಯಕ್ತರಿಗೆ ಎಸ್‍ಡಿಪಿಐ ಬಂಟ್ವಾಳ ನಿಯೋಗವು ಗುರುವಾರ ಮನವಿ ಸಲ್ಲಿಸಿತು.

ನಿಯೋಗದಲ್ಲಿ ಬಂಟ್ವಾಳ ಪುರಸಭಾ ಸಮಿತಿ ಅಧ್ಯಕ್ಷ ಮುನೀಶ್ ಅಲಿ, ಕ್ಷೇತ್ರ ಸಮಿತಿ ಅಧ್ಯಕ್ಷ ಯುಸುಫ್ ಆಲಡ್ಕ, ಜಿಲ್ಲಾ ಸಮಿತಿ ಉಪಾಧ್ಯಕ್ಷ ಐ.ಎಂ.ಆರ್, ಇಕ್ಬಾಲ್, ಜಿಲ್ಲಾ ಪ್ರ.ಕಾರ್ಯದರ್ಶಿ ಶಾಹುಲ್ ಹಮೀದ್ ಎಸ್.ಎಚ್, ಕ್ಷೇತ್ರ ಸಮಿತಿ ಕೋಶಾಧಿಕಾರಿ ಅಬೂಬಕರ್ ಮದ್ದ, ಪುರಸಭಾ ಸಮಿತಿ ಕಾರ್ಯದರ್ಶಿ ಸಿದ್ದೀಕ್ ನಂದರಬೆಟ್ಟು, ಕೋಶಾಧಿಕಾರಿ ಇಕ್ಬಾಲ್ ಎನ್., ಪುರಸಭಾ ಸದಸ್ಯರಾದ ಇದ್ರೀಸ್ ಪಿ.ಜೆ, ಶಂಸಾದ್, ಝೀನತ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News