ದ.ಕ.ಜಿಪಂಗೆ ನೂತನ ಸಿಇಒ

Update: 2018-09-20 15:37 GMT

ಮಂಗಳೂರು, ಸೆ.20: ದ.ಕ.ಜಿಪಂ ಸಿಇಒ ಆಗಿ ಬೀದರ್ ಜಿಪಂ ಸಿಇಒ ಆಗಿದ್ದ ಡಾ.ಸೆಲ್ವಮಣಿ ಆರ್ ಅವರನ್ನು ನೇಮಿಸಿ ಸರಕಾರ ಗುರುವಾರ ಆದೇಶ ಹೊರಡಿಸಿದೆ.

ಮೂಲತಃ ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ಡಾ. ಸೆಲ್ವಮಣಿ 2013ನೇ ಸಾಲಿನ ಐಎಎಸ್ ಅಧಿಕಾರಿ. ಲಿಂಗಸಗೂರುವಿನ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸಿ ಕಳೆದ 22 ತಿಂಗಳಿನಿಂದ ಬೀದರ್ ಜಿಪಂನಲ್ಲಿ ಸಿಇಒ ಆಗಿ ಕರ್ತವ್ಯದಲ್ಲಿದ್ದರು. ಶನಿವಾರ ಅಥವಾ ಸೋಮವಾರ ಅವರು ದ.ಕ. ಜಿಲ್ಲೆಯ ಸಿಇಓ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.

ದ.ಕ. ಜಿಪಂ ಸಿಇಒ ಆಗಿದ್ದ ಡಾ.ಎಂ.ಆರ್.ರವಿ ಅವರನ್ನು ಜವಳಿ ಮತ್ತು ಕೈಮಗ್ಗ ಇಲಾಖೆಯ ಆಯುಕ್ತರಾಗಿ ಬುಧವಾರ ವರ್ಗಾವಣೆ ಮಾಡಲಾಗಿದೆ. 2016ರ ಡಿಸೆಂಬರ್‌ನಲ್ಲಿ ದ.ಕ.ಜಿಪಂ ಸಿಇಒ ಆಗಿ ಡಾ.ಎಂ.ಆರ್.ರವಿ ಅಧಿಕಾರ ವಹಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News