ಮಂಗಳೂರು: 'ಮನ್ಮರ್ಜಿಯ' ಚಲನಚಿತ್ರದ ವಿರುದ್ಧ ಸಿಖ್ಖರಿಂದ ರ್ಯಾಲಿ
Update: 2018-09-20 16:50 GMT
ಮಂಗಳೂರು, ಸೆ.20: ಹಿಂದಿ ಚಲನಚಿತ್ರ 'ಮನ್ಮರ್ಜಿಯ'ದಲ್ಲಿ ಸಮುದಾಯವನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಮಂಗಳೂರಿನಲ್ಲಿರುವ ಸಿಖ್ಖರು ಗುರುವಾರ ಸಂಜೆ ರ್ಯಾಲಿ ನಡೆಸಿ ಪ್ರತಿಭಟಿಸಿದ್ದಾರೆ.
ಶ್ರೀ ಗುರುಸಿಂಗ್ ಸಭಾ ಸೊಸೈಟಿಯ ವತಿಯಿಂದ ಅಧ್ಯಕ್ಷ ಮಹಿಪಾಲ್ ಸಿಂಗ್ ನೇತೃತ್ವದಲ್ಲಿ ನಗರದ ಪುರಭವನದಿಂದ ದ.ಕ.ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿದ ಸಿಖ್ಖರು ಬಳಿಕ ಚಲನಚಿತ್ರದ ವಿರುದ್ಧ ನಿಷೇಧ ಹೇರಬೇಕು ಎಂದು ಆಗ್ರಹಿಸಿದರು. ಬಳಿಕ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.