ಹಿರಿಯಡ್ಕ : ನದಿಗೆ ಬಿದ್ದು ವ್ಯಕ್ತಿ ಮೃತ್ಯು
Update: 2018-09-20 18:11 GMT
ಹಿರಿಯಡ್ಕ, ಸೆ.20: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ಯೊಬ್ಬರು ಪುತ್ತಿಗೆ ನದಿಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಬೈದಬೆಟ್ಟು ಗುಡ್ಡೆಯಂಗಡಿಯ ವಿಶ್ವನಾಥ ಆಚಾರಿ ಎಂಬವರ ಮಗ ಕಿರಣ ಆಚಾರಿ(25) ಎಂದು ಗುರುತಿಸಲಾಗಿದೆ. ಇವರು ಸೆ.17ರಿಂದ 19ರ ಮಧ್ಯಾವಧಿಯಲ್ಲಿ ನದಿಗೆ ಬಿದ್ದು ನಾಪತ್ತೆಯಾಗಿದ್ದು, ಮೃತದೇಹವು ಮಟ್ಟಿಬೈಲು ಆಲಂಬೆಟ್ಟು ಎಂಬಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.