ಕಟಪಾಡಿ : ಜುಗಾರಿ ಆಡುತ್ತಿದ್ದ 10 ಮಂದಿಯ ಬಂಧನ

Update: 2018-09-20 18:19 GMT

ಉಡುಪಿ, ಸೆ.20: ಕಟಪಾಡಿ ಮಟ್ಟು ಗ್ರಾಮದ ಮಟ್ಟು ಕೊಪ್ಲ ಎಂಬಲ್ಲಿ ಸೆ.19ರಂದು ಸಂಜೆ 6.45ರ ಸುಮಾರಿಗೆ ಅಂದರ್-ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ 10 ಮಂದಿಯನ್ನು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮಟ್ಟು ಕೊಪ್ಲದ ಜಗದೀಶ್ ಅಂಚನ್(48), ಉಚ್ಚಿಲದ ಶೇಖರ ಮೂಲ್ಯ (59), ಕಟಪಾಡಿ ಪಳ್ಳಿಗುಡ್ಡೆಯ ಆಸ್ಟಿನ್ ಕೊಟ್ಯಾನ್(45), ರವೀಂದ್ರ(42), ಏಣಗುಡ್ಡೆಯ ಜಯ(48), ಗಣೇಶ್ ಮೆಂಡನ್(48), ಮೂಡಬೆಟ್ಟುವಿನ ಅಬ್ದುಲ್ ಅಝೀಝ್(58), ಆದಿಉಡುಪಿಯ ಹರೀಶ್ ಕುಂದರ್(54), ಮಟ್ಟುವಿನ ವಿನಯ ಅಂಚನ್(30), ಉದ್ಯಾವರ ಕೊಪ್ಲದ ಪ್ರಸಾದ್ ಪೂಜಾರಿ (41) ಬಂಧಿತ ಆರೋಪಿಗಳು. ಇವರಿಂದ 20,070ರೂ. ನಗದು ವಶಪಡಿಸಿ ಕೊಳ್ಳಲಾಗಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News