ಮಡಿಕೇರಿ ಸಂತ್ರಸ್ತರಿಗೆ ತೆಂಕ ಮಿಜಾರ್ ಪಂಚಾಯತ್ ಪ್ರತಿನಿಧಿಗಳ ಕೊಡುಗೆ
Update: 2018-09-20 18:21 GMT
ಮೂಡುಬಿದಿರೆ,ಸೆ.20 : ಇತ್ತೀಚೆಗೆ ಮಳೆಯಿಂದ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿರುವ ಮಡಿಕೇರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ತೆಂಕಮಿಜಾರು ಪಂಚಾಯತ್ನ ಅಧ್ಯಕ್ಷರು ಮತ್ತು ಸದಸ್ಯರು ತಮ್ಮ ಒಂದು ತಿಂಗಳ ಗೌರವಧನ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬಂದಿಗಳ ಒಂದು ದಿನದ ಸಂಬಳದ ರೂ. 29,500ರ ಪರಿಹಾರ ಧನದ ಚೆಕ್ಕನ್ನು ಮೂಡುಬಿದಿರೆ ತಹಶೀಲ್ದಾರ್ ಮಹೇಶ್ಚಂದ್ರ ಅವರ ಮೂಲಕ ಮುಖ್ಯಂತ್ರಿಗಳ ಪರಿಹಾರ ನಿಧಿಗೆ ಗುರುವಾರ ನೀಡಿದರು.
ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ, ಸದಸ್ಯರಾದ ರಮೇಶ್ ಶೆಟ್ಟಿ ಮರಿಯಡ್ಕ, ಹಸನಬ್ಬ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯೀಶ ಚೌಟ ಈ ಸಂದರ್ಭದಲ್ಲಿದ್ದರು.