‘ಏರಾಉಲ್ಲೆರ್‌ಗೆ’ ತುಳು ಚಲನಚಿತ್ರ ಕರಾವಳಿಯಾದ್ಯಂತ ತೆರೆಗೆ

Update: 2018-09-21 14:47 GMT

ಮಂಗಳೂರು, ಸೆ.21: ಬೊಳ್ಳಿ ಮೂವಿಸ್ ಲಾಂಛನದಲ್ಲಿ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ನಿರ್ಮಿಸಲಾದ ‘ಏರಾಉಲ್ಲೆರ್‌ಗೆ’ ತುಳು ಚಲನಚಿತ್ರದ ಬಿಡುಗಡೆ ಕಾರ್ಯಕ್ರಮವು ನಗರದ ರಾಮಕಾಂತಿ ಚಿತ್ರಮಂದಿರದಲ್ಲಿ ಶುಕ್ರವಾರ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ್ ರೈ ಮಾತನಾಡಿ ತುಳು ಭಾಷಾ ಬೆಳವಣಿಗೆಗೆ ಪೂರಕವಾಗಿರುವ ತುಳುಚಿತ್ರರಂಗದಲ್ಲಿ ಉತ್ತಮ ಚಿತ್ರಗಳು ಬರುತ್ತಿದ್ದು ಸಂತೋಷದ ವಿಚಾರವಾಗಿದೆ. ತುಳು ಸಿನೆಮಾಗಳನ್ನು ಎಲ್ಲಾ ತುಳುವರು ವೀಕ್ಷಿಸಿ ಪ್ರೋತ್ಸಾಹಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್, ಟಿ.ಎ.ಶ್ರೀನಿವಾಸ್, ವಿಜಯಕುಮಾರ್ ಕೊಡಿಯಾಲ್‌ಬೈಲ್, ದೇವದಾಸ್ ಪಾಂಡೇಶ್ವರ್, ರಾಜೇಶ್ ಬ್ರಹ್ಮಾವರ, ರತೀಂದ್ರನಾಥ, ಅಶೋಕ್ ಶೇಟ್, ಭಾಸ್ಕರಚಂದ್ರ ಶೆಟ್ಟಿ, ಮುಖೇಶ್ ಹೆಗ್ಡೆ, ಚಂದ್ರಹಾಸ ಶೆಟ್ಟಿ ರಂಗೋಲಿ, ಜಗನ್ನಾಥ ಶೆಟ್ಟಿ ಬಾಳ, ಗಿರೀಶ್ ಎಂ. ಶೆಟ್ಟಿ ಕಟೀಲು, ಪಮ್ಮಿ ಕೊಡಿಯಾಲ್‌ಬೈಲ್, ಪ್ರೇಮ್ ಶೆಟ್ಟಿ ಸುರತ್ಕಲ್, ವಿನ್ಸೆಂಟ್ ಡಿಕುನ್ಹ, ಉದಯ ಪೂಜಾರಿ, ಡಾ. ಶಿವಶರಣ್ ಶೆಟ್ಟಿ, ಇಂದಿರಾ, ನಿರ್ಮಾಪಕರಾದ ಟಿ. ಹರೀಂದ್ರ ಪೈ, ಕಿಶೋರ್ ಕೊಟ್ಟಾರಿ, ದಿನೇಶ್ ಶೆಟ್ಟಿ, ಶರ್ಮಿಳಾ ಕಾಪಿಕಾಡ್, ರಶ್ಮಿಕಾ ಚೆಂಗಪ್ಪ, ಅರ್ಜುನ್ ಕಾಪಿಕಾಡ್, ಅನೂಪ್ ಸಾಗರ್, ಆರಾಧ್ಯ ಶೆಟ್ಟಿ, ಅನುರಾಗ್ , ಪ್ರಕಾಶ್ ಧರ್ಮನಗರ, ಆರ್. ವಸಂತ ರಾವ್, ಅವಿನಾಶ್ ಶೆಟ್ಟಿ, ರತ್ನಾಕರ ಪೈ, ಕಾವ್ಯಾ ಅರ್ಜುನ್, ಸಚಿನ್ ಎ.ಎಸ್. ಉಪ್ಪಿನಂಗಡಿ, ರಾಜೇಶ್ ಕುಡ್ಲ, ಸಾಯಿಕೃಷ್ಣ, ಸುಜೀತ್ ನಾಯಕ್, ಶೋಭರಾಜ್, ಅರ್ಜುನ್ ಕಜೆ ಉಪಸ್ಥಿತರಿದ್ದರು.
ನಿರ್ದೇಶಕ ದೇವದಾಸ್ ಕಾಪಿಕಾಡ್ ಸ್ವಾಗತಿಸಿದರು. ವಿಟ್ಲ ಮಂಗೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News