×
Ad

​ನಾಳೆ ಸಹಕಾರದ ಸಾಹಿತ್ಯಕ- ಕಲಾ ಕಾರ್ಯಕ್ರಮ

Update: 2018-09-21 23:33 IST

ಉಡುಪಿ, ಸೆ.21: ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಶತಮಾನೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಸಾಂಸ್ಕೃತಿಕ ಸ್ಪಂದನ- ಸಹಕಾರದ ಸಾಹಿತ್ಯಕ- ಕಲಾ ಕಾರ್ಯಕ್ರಮವು ಸೆ.23ರಂದು ಸಂಜೆ 4 ಗಂಟೆಗೆ ಉಡುಪಿ ಎಂಜಿಎಂ ಕಾಲೇಜಿನ ನೂತನರವೀಂದ್ರ ಮಂಟಪದಲ್ಲಿ ಜರಗಲಿದೆ.

ಹಿರಿಯ ಚಿಂತಕ ಗೋಪಾಲ ಬಿ.ಶೆಟ್ಟಿ ಅವರ ದೇವಯಾನಿ-ಶರ್ಮಿಷ್ಠೆ ಕಾವ್ಯ ನಾಟಕದ ಎರಡನೆಯ ಪರಿಷ್ಕೃತ ಆವೃತ್ತಿಯನ್ನು ನ್ಯಾಯವಾದಿ ಶಾಂತಾರಾಮ್ ಶೆಟ್ಟಿ ಬಿಡುಗಡೆ ಮಾಡಲಿರುವರು. ನಂತರದಲ್ಲಿ ಸಮೂಹ ಕಲಾವಿದರಿಂದ ರಂಗ ಗಾಯನ ಹಾಗೂ ಕಾವ್ಯ ನಾಟಕದ ಪ್ರಯೋಗ ನಡೆಯಲಿದೆ ಎಂದು ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News