ಬಂಟ್ವಾಳ: ನೇತ್ರಾವತಿ ನದಿಗೆ ಹಾರಿ ಯುವಕ ಆತ್ಮಹತ್ಯೆ

Update: 2018-09-22 14:01 GMT

ಬಂಟ್ವಾಳ, ಸೆ. 22: ವ್ಯಕ್ತಿಯೊಬ್ಬರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮರಕೂಟ್ಲು-ತಲಪಾಡಿ ಮೇಲ್ಸೇತುವೆ ಬಳಿ ಇದೀಗ  ನಡೆದಿದೆ.

ಮೃತರನ್ನು ಬ್ರಹ್ಮರಕೂಟ್ಲು ಸಮೀಪದ ಮಾಡಂಗೆ ನಿವಾಸಿ ಹರೀಶ್  (35) ಎಂದು ಗುರುತಿಸಲಾಗಿದ್ದು, ಅವರು ವೃತ್ತಿಯಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ತಲಪಾಡಿ  ಮೇಲೆ ಹಾಗೂ ಕೆಳ ಸೇತುವೆಯಲ್ಲಿ ಭಾರೀ ಸಂಖ್ಯೆಯ ವಾಹನ ಸವಾರರು ಹಾಗೂ ಕೂತೂಹಲಿಗರು ಜಮಾಯಿಸಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರದಲ್ಲಿ ತೊಡಕು ಉಂಟಾಯಿತು. ಘಟನಾ ಸ್ಥಳಕ್ಕೆ ಬಂಟ್ವಾಳ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

ತಲಪಾಡಿಯ ಈಜುಗಾರರಾದ ಮುಸ್ತಫಾ, ಸಲೀಂ, ಶಾಹುಲ್ ಹಮೀದ್, ಬಶೀರ್, ಎಂ.ಕೆ.ಹಾರಿಸ್, ಆರಿಫ್, ತಾಜುದ್ದೀನ್, ಅನ್ವರ್ ಕೆ.ಎಚ್ ಅವರು ನೇತ್ರಾವತಿ ನದಿಯಲ್ಲಿ ಶೋಧ ನಡೆಸಿ, ಮೃತದೇಹವನ್ನು ಮೇಲೆತ್ತುವಲ್ಲಿ ಯಶಸ್ವಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News