ಪಾಪ್ಯುಲರ್ ಫ್ರಂಟ್ ಬೆಳ್ಳಾರೆ: ಸ್ನೇಹ ಸಮ್ಮಿಲನ ಕಾರ್ಯಕ್ರಮ

Update: 2018-09-22 14:49 GMT

ಬೆಳ್ಳಾರೆ, ಸೆ. 22: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ಳಾರೆ ಡಿವಿಶನ್ ವತಿಯಿಂದ ಈದ್ ಮಿಲನ್ ಸ್ನೇಹ ಸಮ್ಮಿಲನ ಕಾರ್ಯಕ್ರಮವು ರಾಜೀವ್ ಗಾಂಧಿ ಸೇವಾ ಭವನ ಬೆಳ್ಳಾರೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಪ್ಯುಲರ್ ಫ್ರಂಟ್ ಪುತ್ತೂರು ಜಿಲ್ಲಾಧ್ಯಕ್ಷ  ಅಬೂಬಕ್ಕರ್ ರಿಝ್ವಾನ್ ವಹಿಸಿದರು. ದಿಕ್ಷೂಚಿ ಭಾಷಣ ಮಾಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯಸಮಿತಿ ಸದಸ್ಯ ಎ ಕೆ ಅಶ್ರಫ್ ಪ್ರಸಕ್ತ ಭಾರತದ ಪರಿಸ್ಥಿತಿ ಮತ್ತು ಪಾಪ್ಯುಲರ್ ಫ್ರಂಟ್ ನಿರ್ವಹಿಸುತ್ತಿರುವ  ಜವಾಬ್ದಾರಿಯ ಬಗ್ಗೆ  ಮಾತನಾಡಿದರು.

ವೇದಿಕೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ಳಾರೆ ಡಿವಿಶನ್ ಕಾರ್ಯದರ್ಶಿ ಸಿದ್ದೀಕ್. ಎಂ ಉಪಸ್ಥಿತರಿದ್ದರು. ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಬೆಳ್ಳಾರೆ ವಲಯ ವ್ಯಾಪ್ತಿಯ ಹಲವು ಸಂಘಟನೆಗಳ, ಜಮಾಅತ್ ಸಮಿತಿಗಳ ನಾಯಕರುಗಳು ಆಗಮಿಸಿದ್ದರು.

ಫೈಝಲ್ ಬೆಳ್ಳಾರೆ ಸ್ವಾಗತಿಸಿ, ಅಝೀಝ್.ಎಂ ವಂದಿಸಿದರು. ಬಷೀರ್ ಕೆ ಎ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News