ಅಪರಿಚಿತ ಮೃತ್ಯು: ವಾರಸುದಾರರ ಪತ್ತೆಗೆ ಮನವಿ

Update: 2018-09-23 07:57 GMT

ಮಂಗಳೂರು, ಸೆ. 23: ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಕೆಂಚಪ್ಪ (50) ಎಂಬವರು ಶ್ವಾಸಕೋಶ ಮತ್ತ ಮನೋರೋಗಕ್ಕೆ ಸಂಬಂಧಿಸಿದ ಚಿಕಿತ್ಸೆಗಾಗಿ ನಂತರ ಕಣಚೂರು ಆಸ್ಪತ್ರೆಗೆ ದಾಖಲಾಗಿ ಆ. 28ರಂದು ಮೃತಪಟ್ಟಿದ್ದು, ಅವರ ವಾರಸುದಾರರ ಪತ್ತೆಗೆ ಮನವಿ ಮಾಡಲಾಗಿದೆ.

ಮೃತದೇಹವನ್ನು ಕಣಚೂರು ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ. ಈ ಮೊದಲು ರೋಗಿಯನ್ನು ಹಂಪನ್‌ಕಟ್ಟೆ ಪ್ರದೇಶದಿಂದ ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿತ್ತು. ವಾರಸುದಾರರು ಇದ್ದಲ್ಲಿ 7 ದಿನಗಳೊಳಗಾಗಿ ಗುರುತಿನ ಚೀಟಿಯನ್ನು ಸಲ್ಲಿಸಿ ಮೃತದೇಹವನ್ನು ಪಡೆದುಕೊಳ್ಳಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News