ಸಚಿವ ಖಾದರ್‌ಗೆ ನೂತನ ಆಪ್ತ ಸಹಾಯಕ ನೇಮಕ

Update: 2018-09-23 14:50 GMT
ಸಚಿವ ಯು.ಟಿ.ಖಾದರ್‌

ಮಂಗಳೂರು, ಸೆ.23: ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್‌ರ ನೂತನ ಆಪ್ತ ಸಹಾಯಕರಾಗಿ ಚಂದ್ರಶೇಖರ್ ಪಾತೂರು ಅವರನ್ನು ನೇಮಿಸಲಾಗಿದೆ.

ಬಂಟ್ವಾಳ ತಾಲೂಕಿನ ಕೆದಿಲ ಗ್ರಾಪಂ ಪಿಡಿಒ ಆಗಿರುವ ಚಂದ್ರಶೇಖರ್ ಪಾತೂರ್‌ರನ್ನು ತನ್ನ ಆಪ್ತ ಸಹಾಯಕರನ್ನಾಗಿ ನಿಯುಕ್ತಿಗೊಳಿಸಬೇಕು ಎಂದು ಸಚಿವರು ಕೋರಿದ ಮೇರೆಗೆ ಈ ನೇಮಕ ನಡೆದಿದೆ.

ಚಂದ್ರಶೇಖರ ಪಾತೂರು ಈ ಹಿಂದಿನ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮಾನಾಥ ರೈ ಅವರ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದರು. ಇನ್ನೀಗ ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News