ಅನಾರೋಗ್ಯ ಪೀಡಿತ ಮಕ್ಕಳಿಗೆ ಧನಸಹಾಯ ವಿತರಣೆ

Update: 2018-09-23 13:44 GMT

ಉಡುಪಿ, ಸೆ.23: ಅನಾರೋಗ್ಯ ಪೀಡಿತ ಮಕ್ಕಳ ಸಹಾಯಾರ್ಥ ಉಡುಪಿ ಅಂಬಾಗಿಲಿನ ಎ.ಆರ್.ಫ್ರೆಂಡ್ಸ್ ಇವರ ಸಹಯೋಗದೊಂದಿಗೆ ರವಿ ಪೂಜಾರಿ ಅಂಬಾಗಿಲು ಹಾಗೂ ಪ್ರಮೋದ್ ರ್ನೇಲಿಯೊ ಅಂಬಾಗಿಲು ವಿಶೇಷ ವೇಷಧರಿಸಿ ಸಂಗ್ರಹಿಸಿದ ನಿಧಿಯನ್ನು ಶನಿವಾರ ಅಂಬಾಗಿಲಿನಲ್ಲಿ ಸಂಬಂಧಿತ ಮಕ್ಕಳ ಹೆತ್ತವರಿಗೆ ಹಸ್ತಾಂತರಿಸಲಾಯಿತು.

ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಬ್ರಹ್ಮಾವರ ಉಪ್ಪಿನಕೋಟೆಯ ರಿಕ್ಷಾ ಚಾಲಕರಾಗಿರುವ ಉಮೇಶ ಅವರ ನಾಲ್ಕು ವರ್ಷದ ಅನಾರೋಗ್ಯಪೀಡಿತ ಮಗು ದೀಕ್ಷಾಳಿಗೆ 53,000 ರೂ. ಹಾಗೂ ಲಕ್ಷ್ಮೀನಗರದ ನಾಲ್ಕು ತಿಂಗಳ ಮಗು ತನ್ಮಯಿಯ ಹೆತ್ತವರಿಗೆ 26,870 ರೂ.ನ್ನು ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ವಿಶು ಶೆಟ್ಟಿ ಅಂಬಾಲಪಾಡಿ, ಟಿ.ಕೃಷ್ಣಪ್ಪ ತಾಂಗದಗಡಿ, ಅಣ್ಣಯ್ಯ ಪಾಲನ್ ಅಂಬಾಗಿಲು, ಅಶೋಕ್ ಸುವರ್ಣ, ವಿಶೇಷ ವೇಷಧರಿಸಿ ನಿಧಿ ಸಂಗ್ರಹಿಸಿದ ರವಿ ಪೂಜಾರಿ ಅಂಬಾಗಿಲು ಮತ್ತು ಪ್ರಮೋದ್ ಕರ್ನೆಲೀಯೊ, ತಾರಾನಾಥ ಪೂಜಾರಿ, ಮೋಹನ್ ಕಕ್ಕುಂಜೆ, ಅದರ್ಶ ಶೆಟ್ಟಿ ಮತ್ತಿತರು ಉಪಸ್ಥಿತರಿದ್ದರು.

ಸಚೇಂದ್ರ ಅಂಬಾಗಿಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News