ಉಡುಪಿ: ಜಿಲ್ಲಾಸ್ಪತ್ರೆಯ ನಾಲ್ವರು ವೈದ್ಯರು ಶಂಭುಶೆಟ್ಟಿ ಸ್ಮಾರಕ ಆಸ್ಪತ್ರೆಗೆ ನಿಯೋಜನೆ

Update: 2018-09-23 16:04 GMT

ಉಡುಪಿ, ಸೆ.23: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಯ ಉಡುಪಿ ಜಿಲ್ಲಾಸ್ಪತ್ರೆಯ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸರಕಾರದ ಆದೇಶ (2016ರ ಅ.27)ದಂತೆ ಶಂಭು ಶೆಟ್ಟಿ ಸ್ಮಾರಕ ಆಸ್ಪತ್ರೆಗೆ ಸ್ಥಳಾಂತರಿಸಿರುವುದರಿಂದ, ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಾಲ್ವರು ವೈದ್ಯಾಧಿಕಾರಿಗಳನ್ನು ತಾತ್ಕಾಲಿಕವಾಗಿ ಶಂಭು ಶೆಟ್ಟಿ ಸ್ಮಾಪಕ ಆಸ್ಪತ್ರೆಗೆ ನಿಯೋಜನೆ ಮಾಡಿ ಆದೇಶ ಹೊರಡಿಸಲಾಗಿದೆ.

ಎರಡು ತಿಂಗಳ ಮಟ್ಟಿಗೆ ತಾತ್ಕಾಲಿಕವಾಗಿ ಈ ನಿಯೋಜನೆ ಮಾಡಲಾಗಿದೆ. ಆ ಬಳಿಕ ಇವರು ಮತ್ತೆ ಆಯುಕ್ತಾಲಯದಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಸೆ.17ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ. ತಾತ್ಕಾಲಿಕ ನೆಲೆಯಲ್ಲಿ ಶಂಭು ಶೆಟ್ಟಿ ಸ್ಮಾರಕ ಆಸ್ಪತ್ರೆಗೆ ನಿಯೋಜನೆ ಗೊಂಡ ವೈದ್ಯರ ವಿವರ ಹೀಗಿದೆ.

ಡಾ.ವಿಜಯ ವೈ.ಬಿ.-ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಡಾ.ದೀಕ್ಷಿತಾ- ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಡಾ.ವೇಣುಗೋಪಾಲ್ ಯು.-ಮಕ್ಕಳ ತಜ್ಞರು ಹಾಗೂ ಡಾ.ಶೈಲಜಾ- ಮಕ್ಕಳ ತಜ್ಞರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News