ಬೆಳ್ತಂಗಡಿ : ಹಲ್ಲೆ ಆರೋಪಿಗಳು ಪೋಲೀಸ್ ವಶಕ್ಕೆ
Update: 2018-09-24 18:00 GMT
ಬೆಳ್ತಂಗಡಿ,ಸೆ.24 : ನಿವೃತ್ತ ಎಸ್ಐಯವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ಉಜಿರೆ ನಿವಾಸಿಗಳಾದ ರಘುರಾಮ ಶೆಟ್ಟಿ ಮತ್ತು ಅವರ ಪತ್ನಿ ಪ್ರಭಾಮಣಿಯವರನ್ನು ಬೆಳ್ತಂಗಡಿ ಪೋಲೀಸರು ರವಿವಾರ ರಾತ್ರಿ ಬಂಧಿಸಿದ್ದಾರೆ. ಇವರ ಮೇಲೆ ದಲಿತ ದೌರ್ಜನ್ಯ, ಕೊಲೆಯತ್ನ ಸೇರಿದಂತೆ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ಪೋಲೀಸರು ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.