ನಾಗೂರಿನ ಮಹಿಳೆ ಆತ್ಮಹತ್ಯೆ: ಪತಿ ಬಂಧನ

Update: 2018-09-24 18:14 GMT

ಬೈಂದೂರು, ಸೆ.24: ಪತಿಯ ವಿಚಾರದಲ್ಲಿ ಮನನೊಂದ ಪತ್ನಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರನ್ನು ಕಿರಿಮಂಜೇಶ್ವರ ಗ್ರಾಮದ ನಾಗೂರು ಗುಂಜಾನ್‌ಗುಡ್ಡೆ ನಿವಾಸಿ ಮುಹಮ್ಮದ್ ಗೌಸ್ ಎಂಬವರ ಮಗಳು ನೌಶಾದ್ ಬಾನು(27) ಎಂದು ಗುರುತಿಸಲಾಗಿದೆ. ಈ ಸಂಬಂಧ ಪತಿ ನಾಗೂರಿನ ಮೊಮಿನ್ ಅಬ್ದುಲ್ ತಾರಿಕ್(36) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಈಕೆ ಎಂಟು ವರ್ಷಗಳ ಹಿಂದೆ ಅಬ್ದುಲ್ ತಾರಿಕ್ನನ್ನು ಮದುವೆಯಾಗಿದ್ದು, ಕೆಲ ವಿಚಾರಕ್ಕಾಗಿ ಗಂಡ ಹೆಂಡತಿಯ ನಡುವೆ ಆಗಾಗ ಜಗಳ ನಡೆಯುತ್ತಿತ್ತೆನ್ನಲಾಗಿದೆ. ಸೆ.22ರಂದು ತನ್ನ ಅಕ್ಕನಿಗೆ ಕರೆ ಮಾಡಿದ್ದ ನೌಶಾದ್ ಬಾನು ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಳು. ಈ ಬಗ್ಗೆ ಬುದ್ದಿವಾದ ಹೇಳಿದರೂ ಕೇಳದ ಆಕೆ ಸೆ.23ರಂದು ಗಂಡನ ಮನೆಯ ಕೋಣೆಯ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News