​ಮಂಗಳೂರು ವಿವಿ ಕಾಲೇಜಿನಲ್ಲಿ ಉಪನ್ಯಾಸ ಕಾರ್ಯಕ್ರಮ

Update: 2018-09-25 13:03 GMT

ಮಂಗಳೂರು, ಸೆ.25: ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ವಾಣಿಜ್ಯ ಸಂಘವು ವಿದ್ಯಾರ್ಥಿಗಳಲ್ಲಿ ಕ್ರಿಯಾತ್ಮಕತೆಯನ್ನು ಹುಟ್ಟುಹಾಕುವ ಉದ್ದೇಶದೊಂದಿಗೆ ಪಠ್ಯೇತರವಾಗಿ ಹಮ್ಮಿಕೊಂಡ ಸರಣಿ ಉಪನ್ಯಾಸ ಕಾರ್ಕ್ರಮವು ವಾಣಿಜ್ಯ ಸಂಘದ ಉಪನಿರ್ದೇಶಕಿ ಡಾ.ಅನಸೂಯ ರೈ ನೇತೃತ್ವದಲ್ಲಿ ಇತ್ತೀಚೆಗೆ ಜರುಗಿತು.

ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕಿ ಸ್ಮಿತಾ ಕೌಶಲ್ಯಾಭಿವೃದ್ಧಿಯ ಕುರಿತು, ಬೆಳ್ತಂಗಡಿಯ ಯೂನಿಕ್ ಎಜು ಸ್ಕಿಲ್ ಇಂಟರ್‌ನ್ಯಾಷನಲ್‌ನ ಸಂಯೋಜಕ ವೆಂಕಟೇಶ ನಾಯಕ್ ಉದ್ಯಮಶೀಲತೆಯ ಅಭಿವೃದ್ಧಿಯ ಕುರಿತು ಹಾಗೂ ಮ್ಯಾಪ್ಸ್ ಕಾಲೇಜಿನ ಉಪನ್ಯಾಸಕಿ ಕಾವ್ಯಾ ಪಿ. ಹೆಗ್ದೆ ವೃತ್ತಿಪರ ಕೌಶಲ್ಯದ ಕುರಿತು ಉಪನ್ಯಾಸ ನೀಡಿದರು.

ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರೊ.ಮೀನಾ ಎಸ್.ಕಜಂಪಾಡಿ ಉಪಸ್ಥಿತರಿದ್ದರು. ಉಪನ್ಯಾಸಕಿಯರಾದ ಜಯಶ್ರೀ ಮತ್ತು ಸ್ವಸ್ತಿಕಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News