ಕಲಾವಿದ ಸೋಮಯಾಜಿಯಿಂದ ಜಲವರ್ಣ ಪ್ರಾತ್ಯಕ್ಷಿಕೆ
Update: 2018-09-25 15:24 GMT
ಉಡುಪಿ, ಸೆ.25: ಆರ್ಟಿಸ್ಟ್ ಫೋರಂ ಉಡುಪಿ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಹಿರಿಯ ಕಲಾವಿದ ಗಣೇಶ್ ಸೋಮಯಾಜಿ ಇವರಿಂದ ಜಲವರ್ಣ ಪ್ರಾತ್ಯಕ್ಷಿಕೆಯು ಪುತ್ತೂರು ಮಾಯಾಗುಂಡಿಯ ಹೆರಿಟೇಜ್ ಹೌಸ್ನಲ್ಲಿ ನಡೆಯಲಿದೆ.
ಜಲವರ್ಣ ಕಲಾಕೃತಿಗಳ ರಚನೆಯಲ್ಲಿ ನುರಿತ ಕಲಾವಿದರಾದ ಗಣೇಶ್ ಸೋಮಯಾಜಿ ಅವರು ಸೆ.30ರ ರವಿವಾರ ಬೆಳಗ್ಗೆ 10ರಿಂದ ಅಪರಾಹ್ನ 1:00 ಗಂಟೆಯವರೆಗೆ ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದಾರೆ. ಕಲಾಸಕ್ತರು ಹಾಗೂ ಉದಯೋನ್ಮುಖ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆರ್ಟಿಸ್ಟ್ ಫೋರಂನ ಕಾರ್ಯದರ್ಶಿ ಸಕು ಪಾಂಗಾಳ ತಿಳಿಸಿದ್ದಾರೆ.