ಕರ್ಣಾಟಕ ಬ್ಯಾಂಕ್ ಮಂಗಳೂರು ವಿಭಾಗಕ್ಕೆ ‘ಅತ್ಯುತ್ತಮ ವಿಭಾಗ ಪ್ರಶಸ್ತಿ’

Update: 2018-09-25 16:11 GMT

ಮಂಗಳೂರು,ಸೆ.25: ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪನಾ ನಿರ್ದೇಶಕರ ಸ್ನೇಹಮಿಲನ 2018-19ರಲ್ಲಿ ಬ್ಯಾಂಕ್‌ನ ಮಂಗಳೂರು ವಿಭಾಗ ಅತ್ಯುತ್ತಮ ವಿಭಾಗ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಸೆಪ್ಟಂಬರ್ 21ರಂದು ಬೆಂಗಳೂರಿನಲ್ಲಿ ನಡೆದ ವ್ಯವಸ್ಥಾಪಕ ನಿರ್ದೇಶಕರ ಸ್ನೇಹಮಿಲನ ಕಾರ್ಯಕ್ರಮದಲ್ಲಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಹಬಲೇಶ್ವರ ಎಂ.ಎಸ್ ಅವರು ಬ್ಯಾಂಕ್‌ನ ಅತ್ಯುತ್ತಮ ವಿಭಾಗ ಪ್ರಶಸ್ತಿ ರೂಪದಲ್ಲಿ ಬ್ಯಾಂಕ್‌ನ ರೋಲಿಂಗ್ ಶೀಲ್ಡನ್ನು ಮಂಗಳೂರು ವಿಭಾಗದ ಸಹಾಯಕ ಮುಖ್ಯ ಪ್ರಬಂಧಕ ರಮೇಶ್ ಭಟ್‌ಗೆ ನೀಡಿದರು.

ಈ ಸಂದರ್ಭದಲ್ಲಿ ಮುಖ್ಯ ಆಪರೇಟಿಂಗ್ ಆಫೀಸರ್ ರಾಘವೇಂದ್ರ ಭಟ್, ಮುಖ್ಯ ಪ್ರಬಂಧಕರಾದ ಗೋಕುಲ್‌ದಾಸ್ ಮತ್ತು ಮಾಲಿಂಗೇಶ್ವರ ಕೆ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News