ಬಿ.ಮೂಡ: ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಿವೃತ್ತ ಹಿರಿಯ ಶಿಕ್ಷಕರಿಗೆ ಸನ್ಮಾನ
Update: 2018-09-25 18:17 GMT
ಬಂಟ್ವಾಳ, ಸೆ. 25: ಬಿ.ಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಶಿಕ್ಷಕರ ದಿನಾಚರಣೆಯ ಅಂಗವಾಗಿ ವಿವಿಧ ಕಾರ್ಯಕ್ರಮ ನಡೆಯಿತು.
ಜಿಲ್ಲೆಯಾದ್ಯಂತ ವಿದ್ಯಾರ್ಥಿ ವೇತನಕ್ಕಾಗಿ ಉಚಿತ ಸೇವೆ ಸಲ್ಲಿಸುತ್ತಿರುವ ನಿವೃತ್ತ ಶಿಕ್ಷಕ ಕರ್ಪೆ ನಾರಾಯಣ ನಾಯಕ್ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಯೂಸುಫ್, ವೆಂಕಟೇಶ್ವರ ಭಟ್, ಯಶೋಧಾ ಕೆ, ಲವೀನಾ ಶಾಂತಿ ಲೊಬೋ, ಹನೀಫ್, ವಿಯೊಲ್ಲ ವೇಗಸ್, ಆಶಾಲತಾ ಉಪಸ್ಥಿತರಿದ್ದರು.
ಉಪನ್ಯಾಸಕ ದಾಮೋದರ್ ಸ್ವಾಗತಿಸಿ, ಅಬ್ದುಲ್ ರಝಾಕ್ ವಂದಿಸಿದರು. ಬಾಲಕೃಷ್ಣ ನಾಯಕ್ ಸಹಕರಿಸಿದರು.