ವಿಟ್ಲ: ಸಿ.ಎಫ್.ಸಿ. ಒಕ್ಕೆತ್ತೂರು ವತಿಯಿಂದ ಕ್ರೀಡೋತ್ಸವ

Update: 2018-09-27 18:01 GMT

ವಿಟ್ಲ, ಸೆ. 27: ಸಿ.ಎಫ್.ಸಿ. ಒಕ್ಕೆತ್ತೂರು ಇದರ ಆಶ್ರಯದಲ್ಲಿ ಒಕ್ಕೆತ್ತೂರು ಕ್ರೀಡೋತ್ಸವವು ಸೆ. 29ರಂದು ಇಲ್ಲಿನ ಶಾಲಾ ಮೈದಾನದಲ್ಲಿ ನಡೆಯಲಿದೆ.

ವಾಲಿಬಾಲ್ ಪಂದ್ಯಾಟವು ಮದ್ಯಾಹ್ನ 2 ಗಂಟೆಗೆ ಆರಂಭಗೊಳ್ಳಲಿದ್ದು, ವಿಜೇತ ತಂಡಗಳಿಗೆ ಪ್ರಥಮ ರೂ. 5000, ದ್ವಿತೀಯ ರೂ. 3000, ತೃತೀಯ ರೂ. 1000 ನಗದು ಹಾಗೂ ಸಿ ಎಫ್ ಸಿ ಟ್ರೋಫಿ ನೀಡಲಾಗುವುದು. 

ಹಗ್ಗ ಜಗ್ಗಾಟ ಸ್ಪರ್ಧೆಯು ಸಂಜೆ 6 ಕ್ಕೆ ಆರಂಭಗೊಳ್ಳಲಿದ್ದು ಪ್ರಥಮ ರೂ. 3000, ದ್ವಿತೀಯ ರೂ. 1500 ನಗದು ಹಾಗೂ ಸಿ ಎಫ್ ಸಿ ಟ್ರೋಫಿ ನೀಡಲಾಗುವುದು. ಕಬಡ್ಡಿ ಪಂದ್ಯಾಟವು ರಾತ್ರಿ 8 ಕ್ಕೆ ಆರಂಭಗೊಳ್ಳಲಿದ್ದು ಪ್ರಥಮ ರೂ. 5000, ದ್ವಿತೀಯ ರೂ. 3000, ತೃತೀಯ ಹಾಗೂ ಚತುರ್ಥ ತಲಾ ರೂ. 1000 ನಗದು ಮತ್ತು ಸಿ ಎಫ್ ಸಿ ಟ್ರೋಫಿ ನೀಡಲಾಗುವುದು.

ಪಂದ್ಯಾವಳಿಯಲ್ಲಿ ಮಾಜಿ ಸಚಿವರಾದ ಬಿ. ರಮಾನಾಥ ರೈ,  ಮಾಜಿ ಶಾಸಕಿ ಶಕುಂತಲಾ ಶೆಟ್ಟಿ,  ಜಿ. ಪಂ. ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿತುಂಬೆ, ಎಂ. ಎಸ್. ಮುಹಮ್ಮದ್, ಯುವ ಕಾಂಗ್ರೆಸ್ ದ.ಕ. ಜಿಲ್ಲಾಧ್ಯಕ್ಷ ಮಿಥುನ್ ರೈ, ಬಂಟ್ವಾಳ ತಾ. ಪಂ. ಮಾಜಿ ಸದಸ್ಯ ಮಾಧವ ಮಾವೆ ಮೊದಲಾದವರು ಅತಿಥಿಗಳಾಗಿ ಭಾಗವಹಿಸುವರು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9740670111 ಅಥವಾ 8105880461 ಸಂಪರ್ಕಿಸಬಹುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News