×
Ad

ಅಂದರ್ ಬಾಹರ್: ಆರು ಮಂದಿ ಸೆರೆ

Update: 2018-09-30 21:08 IST

ಶಂಕರನಾರಾಯಣ, ಸೆ.30: ಅಂಪಾರು ಗ್ರಾಮದ ಕಲ್ಲುಹೊಳೆ ಎಂಬಲ್ಲಿ ಸೆ.30ರಂದು ಮಧ್ಯಾಹ್ನ ವೇಳೆ ಅಂದರ್ ಬಾಹರ್ ಇಸ್ಟೀಟ್ ಜುಗಾರಿ ಆಡುತ್ತಿದ್ದ ಆರು ಮಂದಿಯನ್ನು ಶಂಕರನಾರಾಯಣ ಪೊಲೀಸರು ಬಂಧಿಸಿ ದ್ದಾರೆ.

ಅಂಪಾರು ಗ್ರಾಮದ ರಾಜು ಶೆಟ್ಟಿ(49), ರವಿ(37), ಕಂಚಾರುವಿನ ಕರುಣಾಕರ ಶೆಟ್ಟಿ(35), ಮೂಡುಬಗೆಯ ಪ್ರಕಾಶ ಪೂಜಾರಿ(38), ಹಳ್ನಾಡು ಗ್ರಾಮದ ಪ್ರಭಾಕರ(35), ಕಲ್ಲುಗದ್ದೆಯ ವಿಶ್ವನಾಥ ಶೆಟ್ಟಿ ಬಂಧಿತ ಆರೋಪಿ ಗಳು. ಇವರಿಂದ 6,860ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News