×
Ad

ಕಡಬ: ವಿದ್ಯಾರ್ಥಿನಿಗೆ ಕಿರುಕುಳ, ಜೀವಬೆದರಿಕೆ; ದೂರು ದಾಖಲು

Update: 2018-09-30 21:24 IST

ಕಡಬ, ಸೆ.30. ವಿದ್ಯಾರ್ಥಿನಿಯೋರ್ವಳು ಕಾಲೇಜು ಬಿಟ್ಟು ಮನೆಗೆ ತೆರಳುತ್ತಿದ್ದ ವೇಳೆ ಠಾಣೆ ವ್ಯಾಪ್ತಿಯ ಕೊಯಿಲ ಎಂಬಲ್ಲಿ ಐವರ ತಂಡವೊಂದು ತನ್ನನ್ನು ಅಪಹರಣಕ್ಕೆ ಯತ್ನಿಸಿದ್ದಲ್ಲದೆ ಜೀವ ಬೆದರಿಕೆ ಒಡ್ಡಿದ್ದಾರೆ‌ ಎಂದು ವಿದ್ಯಾರ್ಥಿನಿ ಕಡಬ ಠಾಣೆಗೆ ದೂರು ನೀಡಿದ್ದಾಳೆ.

ಗುರುವಾರ ಕಾಲೇಜು ಬಿಟ್ಟು ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ವೇಳೆ ಕಾರಿನಲ್ಲಿ ಬಂದ ಪರಿಚಯಸ್ಥರಾದ ಮಹಮ್ಮದ್ ಕೋಲ್ಪೆ, ಅಶ್ರಫ್ ಸಾಲ್ಮರ, ಆದಂ ಕೊಯಿಲ ಹಾಗೂ ಇತರ ಇಬ್ಬರು ತನ್ನ ಕೈ ಹಿಡಿದು, ಜುಟ್ಟನ್ನು ಎಳೆದು ಅಪಹರಣಕ್ಕೆ ಯತ್ನಿಸಿದ್ದಲ್ಲದೆ, ತನ್ನ ತಂದೆಯನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದಾರೆ ಎಂದು ಕಡಬ ಠಾಣೆಗೆ ದೂರು ನೀಡಿದ್ದಾಳೆ.

ವಿದ್ಯಾರ್ಥಿನಿಯ ದೂರಿನಂತೆ ಆರೋಪಿಗಳ ವಿರುದ್ಧ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News