×
Ad

ಅಕ್ರಮ ಮರಳು ಸಾಗಾಟ: ಟಿಪ್ಪರ್ ವಶ

Update: 2018-10-01 22:03 IST

ಕಾರ್ಕಳ, ಅ.1: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರನ್ನು ಕಾರ್ಕಳ ನಗರ ಪೊಲೀಸರು ಸೆ.30ರಂದು ಬೆಳಗ್ಗೆ ಸಾಣೂರು ಗ್ರಾಮದ ಮುರತ್ತಂಗಡಿ ಬಳಿ ಚೆಕ್‌ಪೋಸ್ಟ್ ವಶಕ್ಕೆ ತೆಗೆದುಕೊಂಡಿದ್ದಾರೆ.

ವಶಕ್ಕೆ ತೆಗೆದುಕೊಂಡ 8ಸಾವಿರ ರೂ. ಮೌಲ್ಯದ ಮರಳು ಹಾಗೂ 3ಲಕ್ಷ ರೂ. ವೌಲ್ಯದ ಟಿಪ್ಪರನ್ನು ಪೊಲೀಸರು ಕಾರ್ಕಳ ತಹಶೀಲ್ದಾರಿಗೆ ಒಪ್ಪಿಸಿದ್ದು, ಅ.1ರಂದು ಕಂದಾಯ ನಿರೀಕ್ಷಕ ಸುರೇಶ್ ರಾವ್ ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News