ಮಾಜಿ ಸೈನಿಕ ಮಿಜಾರುಗುತ್ತು ಭಗವಾನ್ದಾಸ್ ಶೆಟ್ಟಿ ನಿಧನ
Update: 2018-10-02 17:25 GMT
ಮೂಡಬಿದಿರೆ, ಅ.2: ಮಿಜಾರುಗುತ್ತು ದಿ. ರಾಮಕೃಷ್ಣ ಶೆಟ್ಟಿ ಅವರ ಪುತ್ರ, ಮಾಜಿ ಸೈನಿಕ ಮಿಜಾರುಗುತ್ತು ಭಗವಾನ್ದಾಸ್ ಶೆಟ್ಟಿ (61) ಮಂಗಳವಾರ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅವರು ಅಗಲಿದ್ದಾರೆ.
ಭಾರತೀಯ ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿ ಬಳಿಕ ಮಂಗಳೂರಿನಲ್ಲಿ ಗುತ್ತಿಗೆದಾರರಾಗಿದ್ದು, ಮೂಡಬಿದಿರೆ ಆಳ್ವಾಸ್ ಹೆಲ್ತ್ ಸೆಂಟರ್ ಆವರಣದಲ್ಲಿ 'ಶೋಭಾ ರಿಫ್ರೆಶ್ಮೆಂಟ್' ನಡೆಸುತ್ತಿದ್ದ ಭಗವಾನ್ದಾಸ್ ಶೆಟ್ಟಿ ಅವರು ಹರೇಕಳಗುತ್ತು ಯಜಮಾನರಾಗಿದ್ದರು.
ಮಾಜಿ ಸೈನಿಕರ ಜಿಲ್ಲಾ ಸಂಘಟನೆಯಲ್ಲಿ ಜತೆ ಕಾರ್ಯದರ್ಶಿಯಾಗಿದ್ದು ಸಕ್ರಿಯರಾಗಿದ್ದ ಅವರು ಮಿಜಾರು ಶ್ರೀ ವಿಷ್ಣು ಮೂರ್ತಿ ದೇವಸ್ಥಾನ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಾಹಿತ್ಯ, ಸಾಂಸ್ಕೃಕ, ಕ್ರೀಡಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು.