×
Ad

ಆರೂರು ಗ್ರಾಪಂನಲ್ಲಿ ಭತ್ತ ಕ್ಷೇತ್ರೋತ್ಸವ

Update: 2018-10-04 21:12 IST

ಉಡುಪಿ, ಅ.4: ಆರೂರು ಗ್ರಾಪಂ ವ್ಯಾಪ್ತಿಯ ಆಲುಂಜೆ ಪ್ರಭಾಕರ ಶೆಟ್ಟಿ ಮನೆ ವಠಾರದಲ್ಲಿ ಭತ್ತದ ಕ್ಷೇತ್ರೋತ್ಸವ ಕಾರ್ಯಕ್ರಮ ಗುರುವಾರ ನಡೆಯಿತು.

ಗ್ರಾಪಂ ಅಧ್ಯಕ್ಷ ರಾಜೀವ್ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯೆ ಗೋಪಿ ಕೆ. ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕೃಷಿ ಇಲಾಖೆಯ ಕೃಷಿ ಅಧಿಕಾರಿ ರೂಪ ಜೆ.ಮಾಡ, ಸಹಾಯಕ ಕೃಷಿ ಅಧಿಕಾರಿ ಸುರೇಶ್ ಬಂಗೇರಾ ಮತ್ತು ಆರೂರು ಗ್ರಾಪಂ ಉಪಾಧ್ಯಕ್ಷರು, ಸದಸ್ಯರು, ಕೃಷಿಕರು ಉಪಸ್ಥಿತರಿದ್ದರು.

ಕೃಷಿ ವಿಜ್ಞಾನಿ ಜಯಪ್ರಕಾಶ್, ಕೃಷಿಕರಿಗೆ ಮಣ್ಣಿನ ಸತ್ವದ ಬಗ್ಗೆ ಮಾಹಿತಿ ನೀಡಿದರು. ಸಹಾಯಕ ಕೃಷಿ ಅಧಿಕಾರಿ ಶಂಕರ್ ಸರ್ವೇಗಾರ್ ಕಾರ್ಯಕ್ರವು ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News