×
Ad

ಚೇರ್ಕಾಡಿ ಬಳಿ ಬಸ್- ಸ್ಕೂಟಿ ಢಿಕ್ಕಿ: ಇಬ್ಬರು ಸವಾರರು ಮೃತ್ಯು

Update: 2018-10-05 21:39 IST

ಬ್ರಹ್ಮಾವರ, ಅ.5: ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಕೂಟಿ ಸವಾರರು ಮೃತಪಟ್ಟ ಘಟನೆ ಚೇರ್ಕಾಡಿ ಗ್ರಾಮದ ಮುಂಡ್ಕಿನ ಜೆಡ್ಡು ಎಂಬಲ್ಲಿ ಗುರುವಾರ ಸಂಜೆ ನಡೆದಿದೆ.

ಮೃತರನ್ನು ಸ್ಕೂಟಿ ಸವಾರ ಅಲುಂಜೆಯ ಅನಿಲ್ ಕುಲಾಲ್(32) ಹಾಗೂ ಸಹ ಸವಾರ ಭಾಸ್ಕರ್ ಕುಲಾಲ್(55) ಎಂದು ಗುರುತಿಸಲಾಗಿದೆ. ಇವರು ಸ್ಕೂಟಿಯಲ್ಲಿ ಕುಂಜಾಲು ಕಡೆಗೆ ಹೋಗುತ್ತಿದ್ದ ಕಂಜಾಲು ಕಡೆಯಿಂದ ಪೇತ್ರಿ ಕಡೆಗೆ ಬರುತ್ತಿದ್ದ ಬಸ್ ಮುಖಾಮುಖಿ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರ ಪರಿಣಾಮ ಸ್ಕೂಟಿಯಲ್ಲಿದ್ದ ಇಬ್ಬರು ರಸ್ತೆಗೆ ಎಸೆಲ್ಪಟ್ಟರು. ಇದರಿಂದ ಗಂಭೀರ ವಾಗಿ ಗಾಯಗೊಂಡ ಇವರಿಬ್ಬರು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಕರೆದು ಕೊಂಡು ಹೋಗುವ ದಾರಿ ಮಧ್ಯೆ  ಮೃತಪಟ್ಟರು.

ಮೃತರಿಬ್ಬರು ಸಂಬಂಧಿಕರಾಗಿದ್ದು, ಗಾರೆ ಕೆಲಸ ಮಾಡುತ್ತಿದ್ದರು. ಅನಿಲ್ ಪತ್ನಿ ಹಾಗೂ ಒಂದೂವರೆ ತಿಂಗಳ ಹೆಣ್ಣು ಮಗು ಮತ್ತು ಭಾಸ್ಕರ್ ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News