×
Ad

'ಗುಂಪು ಹಲ್ಲೆ, ಗುಂಪು ಹತ್ಯೆ ತಡೆಗೆ ರಾಜ್ಯ ಸರ್ಕಾರದಿಂದ ಕಠಿಣ ಕ್ರಮ'

Update: 2018-10-08 20:08 IST

ಉಡುಪಿ, ಅ.8: ದೇಶದ ಕೆಲವು ಭಾಗಗಳಲ್ಲಿ ಇತ್ತೀಚೆಗೆ ಮಕ್ಕಳ ಕಳ್ಳರೆಂದು ಅಥವಾ ಗೋಹಂತಕರೆಂದು ಅನುಮಾನಗೊಂಡು ಅಂತಹವರ ಮೇಲೆ ಕೆಲವರಎು ಕಾನೂನುಬಾಹಿರವಾಗಿ ಗುಂಪು ಹಲ್ಲೆ ನಡೆಸಿರುವುದು ಅಥವಾ ಗುಂಪು ಹತ್ಯೆ ಮಾಡಿರುವ ಪ್ರಕರಣಗಳು ಸಂಭವಿಸಿವೆ. ಈ ರೀತಿ ಅಮಾನುಷ ಅಥವಾ ಬರ್ಬರ ಹತ್ಯೆಯ ಪ್ರಕರಣಗಳು ಕರ್ನಾಟಕ ರಾಜ್ಯದಲ್ಲಿ ನಡೆಯದಂತೆ ತಡೆಯಲು ರಾಜ್ಯ ಪೊಲೀಸ್ ಇಲಾಖೆ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಪ್ರಧಾನವಾಗಿ ಪ್ರತಿ ಜಿಲ್ಲೆಯಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ಮತ್ತು ಅವರಿಗೆ ನೆರವಾಗಲು ಮೇಲ್ದರ್ಜೆಯ ಪೊಲೀಸ್ ಅಧಿಕಾರಿಗಳನ್ನು ಸಹಾಯಕ ನೋಡೆಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ.

ಮಹಾನಗರ ಪಾಲಿಕೆಗಳ ವ್ಯಾಪ್ತಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮಂಗಳೂರು ಮತ್ತು ಕಲಬುರಗಿ ಪ್ರದೇಶಗಳಿಗೆ ಉಪ ಪೊಲೀಸ್ ಆಯುಕ್ತರು ಕಾನೂನು ಮತ್ತು ಶಿಸ್ತುಪಾಲನೆಇವರು ನೊಡೆಲ್ ಅಧಿಕಾರಿಗಳಾಗಿ ಸಹಾಯಕ ನೋಡೆಲ್ ಅಧಿಕಾರಿಯಾಗಿ ಸಂಬಂಧಪಟ್ಟ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಇರುತ್ತಾರೆ.

ಇನ್ನುಳಿದ 24 ಜಿಲ್ಲೆಗಳಲ್ಲಿ ನೊಡೆಲ್ ಅಧಿಕಾರಿಗಳಾಗಿ ಆಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಹಾಯಕ ನೊಡೆಲ್ ಅಧಿಕಾರಿಗಳಾಗಿ ಸಂಬಂಧಪಟ್ಟ ಜಿಲ್ಲೆಯ ಕೇಂದ್ರಸ್ಥಾನದ ಉಪ ಪೊಲೀಸ್ ವರಿಷ್ಠಾಧಿಕಾರಿ ಅಥವಾ ಸಂಬಂಧಪಟ್ಟ ಜಿಲ್ಲೆಯ ಉಪ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿಗಳನ್ನು ನೇಮಿಸಲಾಗಿದೆ.

ವಿಶೇಷ ಗಸ್ತು ದಳ ರಚನೆ, ಆ ಮೂಲಕ ದ್ವೇಷಭಾಷಣ, ಪ್ರಚೋದನಕಾರಿ ಹೇಳಿಕೆ, ಆಥವಾ ಸುಳ್ಳು ಸುದ್ದಿ ಹರಡುವವರ ಕುರಿತು ಗುಪ್ತ ವರದಿ ಸಂಗ್ರಹಿ ಸುವುದು ಮತ್ತು ನಿಗಾ ವಹಿಸುವುದು. ಗಲಭೆಗೀಡಾಗಬಹುದಾದ ಸೂಕ್ಷ್ಮ ಪ್ರದೇಶಗಳ ಗುರುತಿಸುವಿಕೆ, ಪ್ರತಿ ತಿಂಗಳು ನೋಡೆಲ್ ಅಧಿಕಾರಿಗಳಿಂದ ತಮ್ಮ ಪ್ರದೇಶ ವ್ಯಾಪ್ತಿಯ ಗುಪ್ತದಳದೊಂದಿಗೆ ಸಭೆ ಮತ್ತು ಸೂಕ್ತ ಕ್ರಮಕೈಗೊಳ್ಳಲು ಸೂಚಿಸಲಾಗಿದೆ.

ಪ್ರತಿ 3 ತಿಂಗಳಿಗೊಮ್ಮೆ ರಾಜ್ಯ ಮಟ್ಟದಲ್ಲಿ ನೋಡೆಲ್ ಅಧಿಕಾರಿಗಳು, ಗುಪ್ತ ದಳ ಹಾಗೂ ಕಾನೂನು ಮತ್ತು ಶಿಸ್ತುಪಾಲನೆ ವಿಭಾಗದ ಉನ್ನತ ಪೊಲೀಸ್ ಅಧಿಕಾರಿಗಳು, ಪೊಲೀಸ್ ಮಹಾನಿರ್ದೇಶಕರ ಸಭೆ ನಡೆಸಿ ಸೂಕ್ತಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News