ಅಕ್ರಮ ಕಸಾಯಿಖಾನೆ ಆರೋಪ: ಜಾನುವಾರುಗಳು ಪೊಲೀಸ್ ವಶಕ್ಕೆ

Update: 2018-10-08 16:49 GMT

ಕಾಪು, ಅ.8: ಮೂಳೂರು ಗ್ರಾಮದ ಸುನ್ನಿ ಸೆಂಟರ್ ಹಿಂಬದಿಯ ಮನೆಯಲ್ಲಿನ ಅಕ್ರಮ ಕಸಾಯಿಖಾನೆ ನಡೆಸುವ ಆರೋಪದಲ್ಲಿ ಅ.8ರಂದು ನಸುಕಿನ ವೇಳೆ ದಾಳಿ ನಡೆಸಿದ ಪೊಲೀಸರು ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿಯಂತೆ ಅಬ್ಬು ಎಂಬವರ ಮನೆಯ ಸಮೀಪದ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಪಿಕ್‌ವಾಹನ ದಿಂದ ಜಾನುವಾರುಗಳನ್ನು ಇಳಿಸುತ್ತಿದ್ದ ಅಶ್ಪಕ್, ಇಸ್ಮಾಯಿಲ್ ಹಾಗೂ ಎಂ.ಎ. ಖಾದರ್ ಎಂಬವರು ವಾಹನ ಹಾಗೂ ಜಾನುವಾರುಗಳನ್ನು ಬಿಟ್ಟು ಪರಾರಿ ಯಾದರು. ಪೊಲೀಸರು ಜಾನುವಾರು ಹಾಗೂ ವಾಹನಗಳನ್ನು ವಶಪಡಿಸಿ ಕೊಂಡಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News