ಉಡುಪಿ: ಎಸ್ಪಿ ವರ್ಗಾಯಿಸದಂತೆ ಮುಖ್ಯಮಂತ್ರಿಗಳಿಗೆ ಕೋಟ ಪತ್ರ

Update: 2018-10-09 14:39 GMT

ಉಡುಪಿ, ಅ. 9: ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯಾಗಿರುವ ಲಕ್ಷ್ಮಣ ನಿಂಬರ್ಗಿ ಇವರು ಉಡುಪಿಯಲ್ಲಿ ಅಧಿಕಾರ ವಹಿಸಿಕೊಂಡು ಇನ್ನೂ ವರ್ಷ ಪೂರ್ಣಗೊಂಡಿಲ್ಲ. ಯಾವುದೇ ಜಾತಿ, ವರ್ಗ, ಧರ್ಮ, ಪಾರ್ಟಿ, ಪಕ್ಷಗಳನ್ನು ಗಮನಿಸದೆ ಅವರ ಕರ್ತವ್ಯ ನಿರ್ವಹಣೆ ಸಾರ್ವತ್ರಿಕ ಪ್ರಶಂಸೆಗೆ ಒಳಗಾಗಿದೆ.

ಈ ಮಧ್ಯೆ ಇತ್ತೀಚಿನ ಭಾರತ್ ಬಂದ್ ವೇಳೆ ಉದ್ರಿಕ್ತ ಗುಂಪನ್ನು ಚದುರಿಸಲು ಎಸ್ಪಿ ಅವರು ಕೈಗೊಂಡ ಕ್ರಮದ ಕುರಿತು ಕಾಂಗ್ರೆಸ್ ಪಕ್ಷದ ಮೂಲಗಳು ಅವರನ್ನು ರಾಜಕೀಯ ಪ್ರೇರಿತ ವರ್ಗಾವಣೆ ಮಾಡುವ ಆತಂಕವಿದೆ ಎಂದು ಮಾಧ್ಯಮಗಳು ಪ್ರಕಟಿಸಿವೆ.

ಸರಕಾರವೊಂದು ಆಡಳಿತಾತ್ಮಕ ಕಾರಣ ಹೊರತು ಪಡಿಸಿ ರಾಜಕೀಯ ಪ್ರೇರಿತ ಕಾರಣಗಳಿಗೆ ವರ್ಗಾವಣೆ ಮಾಡಿದರೆ ತಪ್ಪಾಗುತ್ತದೆ. ಆದ್ದರಿಂದ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಲಕ್ಷ್ಮಣ್ ನಿಂಬರಗಿ ಅವರನ್ನು ಉಡುಪಿ ಜಿಲ್ಲೆಯಿಂದ ವರ್ಗಾವಣೆ ಮಾಡಬಾರದು ಎಂದು ವಿಧಾನಪರಿಷತ್‌ನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News