ಅಕ್ರಮ ಜಾನುವಾರು ಸಾಗಾಟ ಆರೋಪ: ಮೂವರ ಸೆರೆ

Update: 2018-10-09 15:59 GMT

ಕೋಟ, ಅ.9: ಮಹೇಂದ್ರ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಜಾನು ವಾರುಗಳನ್ನು ಸಾಗಾಟ ಮಾಡುತ್ತಿದ್ದ ಮೂವರನ್ನು ಕೋಟ ಪೊಲೀಸರು ಅ.9ರಂದು ಬೆಳಗ್ಗೆ ನೈಲಾಡಿ ಚಿಟ್ಟೆಕಟ್ಟೆ ಶ್ರೀಮಹಾಗಣಪತಿ ದೇವಸ್ಥಾನದ ಬಳಿ ಬಂಧಿಸಿದ್ದಾರೆ.

ತೆಕ್ಕಟ್ಟೆ ಗ್ರಾಮದ ಕಂಚಿಗಾರ್‌ಬೆಟ್ಟುವಿನ ಸುಧಾಕರ ದೇವಾಡಿಗ (39), ದೇವಾಡಿಗರ ಬೆಟ್ಟುವಿನ ಪ್ರಕಾಶ ದೇವಾಡಿಗ (35), ಗಿಳಿಯಾರು ಗ್ರಾಮ ಹರ್ತಟ್ಟು ವಿನ ಶ್ರೀಧರ ದೇವಾಡಿಗ (58) ಬಂಧಿತ ಆರೋಪಿಗಳು.

ಇವರಿಂದ 30,500 ರೂ. ಮೌಲ್ಯದ 3 ದನ ಮತ್ತು ಒಂದು ಕರು ಹಾಗೂ 2 ಲಕ್ಷ ರೂ. ಮೌಲ್ಯದ ಮಹೇಂದ್ರ ಗೂಡ್ಸ್ ವಾಹನವನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News