ಕರ್ನಾಟಕ ಕರಾವಳಿಯಲ್ಲಿ ಗಾಳಿ-ಮಳೆ ಎಚ್ಚರಿಕೆ

Update: 2018-10-09 16:13 GMT

ಉಡುಪಿ, ಅ.9: ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಸೃಷ್ಟಿ ಯಾಗಿರುವ ಚಂಡಮಾರುತ ‘ಲುಬಾನ್’ ಯಮೆನ್ ಹಾಗೂ ಓಮಾನ್ ದೇಶದತ್ತ ಚಲಿಸುತಿದ್ದು, ಇದರಿಂದ ಕರ್ನಾಟಕದ ಕರಾವಳಿಯಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಗಾಳಿಯಿಂದ ಕೂಡಿದ ಮಳೆ ಸುರಿಯುವ ನಿರೀಕ್ಷೆ ಇದೆ.

ಇದರಿಂದ ಮೀನುಗಾರರು ಅ.12ರವರೆಗೆ ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಪಶ್ಚಿಮ ಕರಾವಳಿಯಲ್ಲಿ ಚಂಡಮಾರುತದ ಪರಿಣಾಮ ಇಲ್ಲದಿದ್ದರೂ, ಸಮುದ್ರ ಪ್ರಕ್ಷುಬ್ಧವಾಗಿರಲಿದ್ದು, ಭಾರೀ ಗಾತ್ರದ ತೆರೆಗಳು ದಡವನ್ನು ಅಪ್ಪಳಿಸುವ ಸಾಧ್ಯತೆ ಇದೆ.

ಕರ್ನಾಟಕ ಕರಾವಳಿಯ ಎಲ್ಲಾ ಬಂದರುಗಳಲ್ಲಿ ಎಚ್ಚರಿಕೆಯ ಸೂಚನೆ ನಂ.2ನ್ನು ಪ್ರದರ್ಶಿಸುವಂತೆ ಬಂದರು ಇಲಾಖೆಗೆ ತಿರುವನಂತಪುರದ ಹವಾಮಾನ ಇಲಾಖೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News