ಕಾಪುವಿನ ಹಿರಿಯ ಛಾಯಾಗ್ರಾಹಕ ಲಕ್ಷ್ಮಣ್ ಸುವರ್ಣ ನಿಧನ

Update: 2018-10-12 18:18 GMT

ಕಾಪು, ಅ. 12: ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕಾಪುವಿನ‌ ಹಿರಿಯ ಛಾಯಾಚಿತ್ರ ಗ್ರಾಹಕ, ರೂಪಮ್ ಸ್ಟುಡಿಯೋ ಇದರ ಮಾಲಕ ಲಕ್ಷ್ಮಣ್ ಸುವರ್ಣ (73) ಶುಕ್ರವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.

1954 ರಲ್ಲಿ ಛಾಯಾಗ್ರಹಣ ವೃತ್ತಿಗೆ ಪದಾರ್ಪಣೆಗೈದಿದ್ದ ಅವರು ಮುಂಬೈ, ದುಬೈ ಸಹಿತ ಹೊರ ರಾಜ್ಯ, ಹೊರ ರಾಷ್ಟ್ರಗಳಲ್ಲೂ ವೃತ್ತಿಯನ್ನು ನಿರ್ವಹಿಸಿ ದ್ದರು. ಮುಂಬೈ ಚಿತ್ರರಂಗದ ಹಲವು ನಟರುಗಳ ಏರಿಯಲ್ ಪೋಟೋಗ್ರಾಫಿಯಲ್ಲಿ ನಿರತರಾಗಿದ್ದ ಅವರು, ಸಂಶೋಧನಾತ್ಮಕ ಫೋಟೋಗ್ರಫಿಯತ್ತಲೂ ವಿಶೇಷ ಒಲವು ಹೊಂದಿದ್ದರು. ಎಸ್.ಕೆ.ಪಿ.ಎ ಕಾಪು ವಲಯದ ಸ್ಥಾಪಕಾಧ್ಯಕ್ಷರಾಗಿದ್ದ ಅವರು ಸಂಘಟನೆಯನ್ನು ಅತ್ಯುತ್ತಮ ರೀತಿಯಲ್ಲಿ ಮುನ್ನಡೆಸಿದ್ದರು‌. 

ಅವರ ಸೇವೆಯನ್ನು ಗುರುತಿಸಿ ಉಡುಪಿ ಜಿಲ್ಲಾಡಳಿತವು 2014ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದು, ವಿವಿಧ ಸಂಘ - ಸಂಸ್ಥೆಗಳೂ ಸಮ್ಮಾನಿಸಿ, ಗೌರವಿಸಿದ್ದವು. 

ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು, ಅಪಾರ ಬಂಧು ವರ್ಗದವರನ್ನು ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News