ಪ್ರೇಮ ವೈಫಲ್ಯ: ನೇಣುಬಿಗಿದು ಯುವತಿ ಆತ್ಮಹತ್ಯೆ

Update: 2018-10-14 10:59 GMT

ಮಂಗಳೂರು, ಅ.13: ಪ್ರೀತಿ ವಿಷಯದಲ್ಲಿ ಮನನೊಂದ ಯುವತಿಯೊಬ್ಬಳು ಅಪಾರ್ಟ್‌ಮೆಂಟ್‌ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ.

ಮೂಲತಃ ಬೆಳ್ತಂಗಡಿ ನಿವಾಸಿ, ಕದ್ರಿಯ ಬಾಡಿಗೆಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸಿಸುತ್ತಿರುವ ಅಶ್ವಿನಿ ಶೆಟ್ಟಿ (26) ಮೃತಪಟ್ಟ ಯುವತಿ.

ಈಕೆ ಡಿಗ್ರಿ ಮುಗಿಸಿದ ಬಳಿಕ ಎಲ್‌ಎಲ್‌ಬಿ ಶಿಕ್ಷಣ ಪಡೆದು, ನಗರದಲ್ಲಿ ವಕೀಲ ಕಚೇರಿಯಲ್ಲಿ ಕಾನೂನು ಅಭ್ಯಾಸ ಮಾಡುತ್ತಿದ್ದಳು. ಆ ಬಳಿಕ ಫೈನಾನ್ಸ್ ಕಂಪೆನಿಯೊಂದರಲ್ಲಿ ಉದ್ಯೋಗ ಪಡೆದು ಅಲ್ಲೂ ಕೆಲಸ ಬಿಟ್ಟು ಇತ್ತೀಚೆಗೆ ಶಿಪ್ಪಿಂಗ್ ಕಂಪೆನಿಯ ಸಂದರ್ಶನಕ್ಕೆ ಹಾಜರಾಗಿ ಉದ್ಯೋಗ ಪಡೆದಿದ್ದಳು. ಆದರೆ ಅಲ್ಲಿ ಕೆಲಸಕ್ಕೆ ಸೇರಿರಲಿಲ್ಲ. ಒಂದು ತಿಂಗಳಿನಿಂದ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾಳೆ ಎಂದು ತಿಳಿದು ಬಂದಿದೆ.

ಪ್ರೀತಿ ಎಡವಟ್ಟು ಕಾರಣ?: ಯುವತಿಗೆ ವ್ಯಕ್ತಿಯೊಬ್ಬನ ಜತೆ ಸಂಬಂಧವಿದ್ದು, ಈ ವಿಷಯ ಆಕೆಯ ಮನೆಯವರಿಗೆ ತಿಳಿದಿರಲಿಲ್ಲ. ಈಕೆಗೆ ಮದುವೆ ವಯಸ್ಸಾದ ಕಾರಣ ಮನೆಯವರು ಬೇರೆ ಸಂಬಂಧ ನೋಡಿ ಮದುವೆಗೆ ತಯಾರಿ ನಡೆಸುತ್ತಿದ್ದರು. ಆ ಯುವಕನ ಜತೆಯೂ ಈಕೆ ಸಂಪರ್ಕ ವಿರಿಸಿಕೊಂಡಿದ್ದಳು. ಇದು ಯುವತಿಯ ಮೊದಲ ಪ್ರೇಮಿಗೆ ಗೊತ್ತಾಗಿ ಆತ ಆತ್ಮಹತ್ಯೆ ಬೆದರಿಕೆ ಹಾಕಿದ ಎನ್ನಲಾಗಿದೆ. ಇದರಿಂದ ಗೊಂದಲಕ್ಕೆ ಸಿಲುಕಿ ಯುವತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಆದರೆ ಸತ್ಯ ವಿಷಯ ಪ್ರಕರಣದ ಸಮಗ್ರ ತನಿಖೆಯಿಂದ ತಿಳಿದು ಬರಬೇಕಿದೆ.

ಈ ಕುರಿತು ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News