ಜಾನುವಾರು ಕಳವಿಗೆ ಯತ್ನ: ಓರ್ವನ ಸೆರೆ
Update: 2018-10-14 17:24 GMT
ಬೈಂದೂರು, ಅ.14: ಜಾನುವಾರುಗಳನ್ನು ಕಳವು ಮಾಡಲು ಯತ್ನಿಸುತ್ತಿದ್ದಾರೆ ಎನ್ನಲಾದ ನಾಲ್ವರ ಪೈಕಿ ಓರ್ವನನ್ನು ಬೈಂದೂರು ಪೊಲೀಸರು ಶಿರೂರು ಕರಿಕಟ್ಟೆ ಎಂಬಲ್ಲಿ ರವಿವಾರ ಬಂಧಿಸಿದ್ದಾರೆ.
ಕಂಡ್ಲೂರಿನ ಕೆ.ಎಂ.ಫಹಾದ್(19) ಬಂಧಿತ ಆರೋಪಿ.
ನಯೀಮ್ ಕಂಡ್ಲೂರು, ಅಜೀಮ್ ಭಟ್ಕಳ, ಇಫ್ಜಾಲ್ ಭಟ್ಕಳ ಎಂಬವರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇವರು ಟವೇರಾ ಕಾರಿನಲ್ಲಿ ಬಂದು ಜಾನುವಾರುಗಳನ್ನು ಕಳವು ಮಾಡಲು ಪ್ರಯತ್ನಿಸುತ್ತಿದ್ದರೆನ್ನಲಾಗಿದೆ. ಈ ಬಗ್ಗೆ ಮಾಹಿತಿ ತಿಳಿದು ಆಗಮಿಸಿದ ಪೊಲೀಸರು ಓರ್ವನನ್ನು ಬಂಧಿಸಿದ್ದು, ಉಳಿದ ಮೂವರು ಪರಾರಿಯಾಗಿದ್ದಾರೆ. ಬಂಧಿತನಿಂದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.