ರಾಜೇಶ್ ರಾವ್‌ಗೆ ‘ಕಲ್ಕೂರ ಕನ್ನಡ ಸಿರಿ’ ಪ್ರಶಸ್ತಿ ಪ್ರದಾನ

Update: 2018-10-15 15:43 GMT

ಮಂಗಳೂರು, ಅ.15: ಹೋಟೆಲ್ ಉದ್ಯಮಿ, ಚೆನ್ನೈನ ವುಡ್ ಲ್ಯಾಂಡ್ಸ್ ಹೋಟೆಲ್‌ನ ಪಾಲುದಾರ ಕಡಂದಲೆ ರಾಜೇಶ್ ರಾವ್ ಅವರನ್ನು ಕಲ್ಕೂರ ಪ್ರತಿಷ್ಠಾನದಿಂದ ‘ಕಲ್ಕೂರ ಕನ್ನಡ ಸಿರಿ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಖ್ಯಾತ ನರರೋಗತಜ್ಞ ಡಾ. ಐ.ಜಿ. ಭಟ್ ಅವರು ರಾಜೇಶ್ ರಾವ್ ಹಾಗೂ ಅಖಿಲಾ ರಾಜೇಶ್ ರಾವ್ ದಂಪತಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಕದ್ರಿಕಂಬ್ಳ ರಸ್ತೆಯ ಮಲ್ಲಿಕಾ ಬಡವಾಣೆಯಲ್ಲಿರುವ ಮಂಜು ಪ್ರಾಸಾದದ ವಾದಿರಾಜ ಮಂಟಪದಲ್ಲಿ ಜರಗಿದ ಸನ್ಮಾನ ಸಮಾರಂಭದಲ್ಲಿ ಗಣಪತಿ ಆಚಾರ್ಯ ಶರವು ರಾಘವೇಂದ್ರ ಶಾಸ್ತ್ರಿ, ವಿಪ್ರ ಸಮಾಗಮದ ಅಧ್ಯಕ್ಷ ಪಿ.ರಾಮಕೃಷ್ಣ ರಾವ್, ಸಮತಾ ಬಳಗದ ಅಧ್ಯಕ್ಷೆ ರಮಾಮಣಿ ಭಟ್, ಸುಧಾಕರ ರಾವ್ ಪೇಜಾವರ, ಜಿ.ಕೆ. ಭಟ್ ಸೇರಾಜೆ, ಕದ್ರಿ ನವನೀತ ಶೆಟ್ಟಿ, ಪೂರ್ಣಿಮಾ ರಾವ್ ಪೇಜಾವರ, ವಿನೋದ ಪಿ. ಕಲ್ಕೂರ ಹಾಗೂ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪಕುಮಾರ ಕಲ್ಕೂರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News