‘ಮೀಟೂ’ ಆಂದೋಲನಕ್ಕೆ ಮಾಯಾವತಿ ಬೆಂಬಲ: ಎಂ.ಜೆ. ಅಕ್ಬರ್ ವಿರುದ್ಧ ಕ್ರಮಕ್ಕೆ ಆಗ್ರಹ

Update: 2018-10-15 16:56 GMT

ಹೊಸದಿಲ್ಲಿ, ಅ.15: ಲೈಂಗಿಕ ಕಿರುಕುಳ ಆರೋಪವನ್ನೆದುರಿಸುತ್ತಿರುವ ಕೇಂದ್ರ ಸಚಿವ ಎಂಜೆ ಅಕ್ಬರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಆಗ್ರಹಿಸಿದ್ದಾರೆ.

ಹಲವು ಮಹಿಳೆಯರು ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪಗಳನ್ನು ಮಾಡಿದ್ದಾರೆ. ಆದರೆ ಆರೋಪಮುಕ್ತರಾಗುವ ಬದಲು ಅವರು ಈ ಆರೋಪಗಳಿಗೆ ರಾಜಕೀಯ ಬಣ್ಣ ನೀಡುತ್ತಿದ್ದಾರೆ ಎಂದವರು ಆರೋಪಿಸಿದರು.

ಲೈಂಗಿಕ ಕಿರುಕುಳಗಳ ವಿರುದ್ಧ ವಿವಿಧ ಕ್ಷೇತ್ರಗಳ ಮಹಿಳೆಯರು ಧ್ವನಿಯೆತ್ತಲು ಮೀಟೂ ಆಂದೋಲನವು ವೇದಿಕೆಯಾಗಿದೆ ಎಂದ ಅವರು, ಈ ಗಂಭೀರ ಪ್ರಕರಣದ ಬಗ್ಗೆ ಬಿಜೆಪಿ ನಾಯಕರು ಮೌನವಾದಂತೆ ನಟಿಸುತ್ತಿದ್ದಾರೆ. ಆದರೆ ಜನರು ಅವರನ್ನು ಕ್ಷಮಿಸುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News