ಮಂಜುನಾಥ ಕಾಮತ್ ನಿಧನ

Update: 2018-10-16 13:18 GMT

ಮಂಗಳೂರು, ಅ. 16:  ಎಕ್ಸ್ ಪರ್ಟ್ ಎಜುಕೇಷನಲ್ ಆ್ಯಂಡ್ ಚಾರಿಟೇಬಲ್ ಫೌಂಡೇಶನ್‍ನ ಟ್ರಸ್ಟಿ  ಬಿ. ಮಂಜುನಾಥ ಕಾಮತ್ (75) ಅವರು ಇಂದು ಬೆಳಗ್ಗೆ ಮಂಗಳೂರಿನ ಅತ್ತಾವರದಲ್ಲಿದ್ದ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಬೆಳ್ಳಾರೆಯ ದಿ. ಬಾಬು ರಾಯ ಗೋವಿಂದ ಕಾಮತ್ ಅವರ ಪುತ್ರರಾಗಿರುವ ಮಂಜುನಾಥ ಕಾಮತ್, ಮೂಲತಃ ಸುಳ್ಯ ತಾಲೂಕಿನ ಬೆಳ್ಳಾರೆಯ ನಿವಾಸಿ. ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರರಾಗಿದ್ದರು. ಮಂಗಳೂರು ಗಣೇಶ್ ಬೀಡಿ ಸಂಸ್ಥೆಯಲ್ಲಿ 40 ವರ್ಷಗಳ ಕಾಲ ಪ್ರಬಂಧಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು.

ಪತ್ನಿ, ಪುತ್ರಿಯರಾದ ಕೊಚ್ಚಿಯ ಲಕ್ಷ್ಮೀ ಪೈ, ನಗರದ ಕೆನರಾ ಹೈಸ್ಕೂಲ್‍ನ ಹಿಂದಿ ಉಪನ್ಯಾಸಕಿ ಶಾರದಾ ನಾಯಕ್, ಎಕ್ಸ್ ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್. ನಾಯಕ್, ಅಮೇರಿಕಾದಲ್ಲಿ ನೆಲೆಸಿರುವ ಆಶಾ ಕಿಣಿ ಸೇರಿದಂತೆ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರವು ಗುರುವಾರ ಬೆಳಗ್ಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News