ಉಡುಪಿ: 4 ಸ್ಕೌಟ್ಸ್-ಗೈಡ್ಸ್ ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ

Update: 2018-10-16 14:47 GMT

ಉಡುಪಿ, ಅ.16: ಭಾರತ್ ಸ್ಕೌಟ್ಸ್ ಗೈಡ್ಸ್ ಚಳುವಳಿಯಲ್ಲಿ ಸುದೀರ್ಘ ಕಾಲ ಅವಿಸ್ಮರಣಿಯ ಸೇವೆ ಸಲ್ಲಿಸಿದ ಉಡುಪಿ ಜಿಲ್ಲೆಯ ನಾಲ್ವರು ಶಿಕ್ಷಕರಿಗೆ ಬೆಂಗಳೂರಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಿದ ವಿ.ಪಿ ದೀನದಯಾಳು ನಾಯ್ಡು ಇವರ ಜನ್ಮ ಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಅರ್. ಸಿಂದ್ಯಾ ಸನ್ಮಾನ ಪತ್ರ ಹಾಗೂ ಬೆಳ್ಳಿ ಪದಕ ನೀಡಿ ಗೌರವಿಸಿದರು.

ಕುಂದಾಪುರದ ಸ್ಕೌಟ್ಸ್ ಮಾಸ್ಟರ್ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ಸುಬ್ರಮಣ್ಯ ಎಸ್., ಕುಕ್ಕಂಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಯಶೋಧ ಹೆಗ್ಡೆ, ಉಡುಪಿ ಕಬ್ ಮಾಸ್ಟರ್ ಸಿಲಾಸ್ ಇಂಟರ್ ನ್ಯಾಶನಲ್ ಸ್ಕೂಲ್‌ನ ಶ್ರೀಪಾದ್ ನಾಯಕ್ ಹಾಗೂ ಇಂದ್ರಾಳಿ ಆಂಗ್ಲ ಮಾಧ್ಯಮ ಶಾಲೆ ಬುಲ್ ಬುಲ್ ಶಿಕ್ಷಕಿ ವೀಣಾ ಬಾಯಿ ಸನ್ಮಾನಿತರಾದ ಶಿಕ್ಷಕರು.

ಇವರ ಸಾಧನೆಗೆ ಜಿಲ್ಲಾ ಆಯುಕ್ತೆ ಶಾಂತಾ ವಿ ಆಚಾರ್ಯ ಸೇರಿದಂತೆ ಎಲ್ಲಾ ಜಿಲ್ಲಾ ಪದಾಧಿಕಾರಿಗಳು ಆಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News