ಯುವತಿ ನಾಪತ್ತೆ: ದೂರು

Update: 2018-10-16 15:31 GMT

ಪುತ್ತೂರು, ಅ. 16: ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಯುವತಿಯೊಬ್ಬಳು ತನ್ನ ಮನೆಯಿಂದ ರಾತ್ರಿ ವೇಳೆ ನಾಪತ್ತೆಯಾಗಿರುವ ಘಟನೆ ಪುತ್ತೂರು ತಾಲೂಕಿನ ಕೊಡಿಪ್ಪಾಡಿ ಗ್ರಾಮದ ಕೊಂಟ್ರುಪ್ಪಾಡಿ ಎಂಬಲ್ಲಿ ನಡೆದಿದ್ದು, ಘಟನೆಯ ಕುರಿತು ಪುತ್ತೂರಿನ ಮಹಿಳಾ ಠಾಣೆಗೆ ದೂರು ನೀಡಲಾಗಿದೆ.

ಕೊಡಿಪ್ಪಾಡಿ ಗ್ರಾಮದ ಕೊಂಟ್ರುಪ್ಪಾಡಿ ನಿವಾಸಿ ಚಿದಾನಂದ ಪ್ರಭು ಅವರ ಪುತ್ರಿ ಪವಿತ್ರಾ (19) ನಾಪತ್ತೆಯಾದ ಯುವತಿ.

ಬೆಂಗಳೂರಿನ ರಾಜಾಜಿನಗರದಲ್ಲಿನ ಉದ್ಯೋಗದಲ್ಲಿದ್ದ ಪವಿತ್ರಾ 25 ದಿನಗಳ ಹಿಂದೆ ಊರಿಗೆ ಬಂದವರು ತನ್ನ ಮನೆಯಿಂದ ಕಳೆದ ಶುಕ್ರವಾರ ರಾತ್ರಿ 12 ಗಂಟೆಯ ವೇಳೆಗೆ ನಾಪತ್ತೆಯಾಗಿದ್ದರು. ಈ ಕುರಿತು ಹುಡುಕಾಡಿದರೂ ಆಕೆಯ ಪತ್ತೆಯಾಗದ ಹಿನ್ನೆಲೆಯಲ್ಲಿ ಮಂಗಳವಾರ ಆಕೆಯ ಹೆತ್ತವರು ಪುತ್ತೂರು  ಠಾಣೆಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News