ಹಾವು ಕಚ್ಚಿ ಅನಾರೋಗ್ಯಪೀಡಿತ 5 ತಿಂಗಳ ಮಗು ಮೃತ್ಯು

Update: 2018-10-17 17:14 GMT

ರಾಯ್ಪುರ, ಅ.17: ಮೂಢನಂಬಿಕೆಗೆ 5 ತಿಂಗಳ ಮಗುವೊಂದು ಬಲಿಯಾದ ಘಟನೆ ಛತ್ತೀಸ್ ಗಢದಲ್ಲಿ ನಡೆದಿದೆ. ‘ನಾಗದೇವತೆ’ಯ ಆಶೀರ್ವಾದ ಪಡೆಯಲು ಅನಾರೋಗ್ಯ ಪೀಡಿತ ಮಗುವನ್ನು ಪೋಷಕರು ಹಾವಾಡಿಗನ ಕೈಗೆ ಕೊಟ್ಟಿದ್ದು, ದುರ್ಘಟನೆ ಸಂಭವಿಸಿದೆ.

ಹಾವು ವಿಷಕಾರಿಯಲ್ಲ ಎಂದು ಹಾವಾಡಿಗ ತಿಳಿಸಿದ್ದು, 2 ಗಂಟೆಗಳ ಕಾಲ ಪೂಜೆ ನಡೆಸಿದ್ದ. ಮಗುವಿನ ಎದೆಬಡಿತ ಆಗಲೇ ಕಡಿಮೆಯಾಗಿತ್ತು. ಮಗು ಹಾವಿನ ಆಶೀರ್ವಾದ ಪಡೆಯಬೇಕು ಎಂದಿದ್ದ ಹಾವಾಡಿಗ ಮಗುವಿನ ಕುತ್ತಿಗೆಗೆ ಹಾವನ್ನು ಹಾಕಿದ್ದ. ಕೂಡಲೇ ಹಾವು ಮಗುವಿಗೆ ಕಚ್ಚಿತ್ತು.

ಹಾವು ವಿಷರಹಿತ ಎಂದು ಆತ ಮತ್ತೆ ಹೇಳಿದ್ದ. ಆದರೆ ಮಗು ಇದ್ದಕ್ಕಿದ್ದಂತೆ ಅಸ್ವಸ್ಥವಾಗಿ ಮೃತಪಟ್ಟಿತ್ತು. ಆರೋಪಿ ಹಾವಾಡಿಗನನ್ನು ಹಿಡಿದ ಸ್ಥಳೀಯರು ಆತನನ್ನು ಪೊಲೀಸರಿಗೊಪ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News