ಬಂಟ್ವಾಳ: ತೆಂಗಿನಮರದಿಂದ ಬಿದ್ದು ಇಬ್ಬರಿಗೆ ಗಾಯ

Update: 2018-10-18 05:46 GMT

ಬಂಟ್ವಾಳ, ಅ. 18:   ತೆಂಗಿನಮರದಿಂದ ಆಕಸ್ಮಿಕವಾಗಿ ಬಿದ್ದ ಪರಿಣಾಮ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಿ.ಸಿ.ರೋಡ್ ತಲಪಾಡಿಯಲ್ಲಿ ಗುರುವಾರ ನಡೆದಿದೆ.

ಇಲ್ಲಿನ ಮನೆಯ ಮಾಲಕ ಮುಹಮ್ಮದ್ ಬಿ.ಎಂ.ಟಿ. ಹಾಗೂ ಬ್ರಹ್ಮರಕೂಟ್ಲು ಸಮೀಪದ ಕನಕಪಾಡಿ ನಿವಾಸಿ, ಕೂಲಿ ಕಾರ್ಮಿಕ ಡೊಂಬಯ್ಯ ಗಾಯಗೊಂಡವರು.

ಇಂದು ಬೆಳಗ್ಗೆ ತಲಪಾಡಿ ನಿವಾಸಿ ಮುಹಮ್ಮದ್ ಎಂಬವರಿಗೆ ಸೇರಿದ ತೆಂಗಿನಮರದಿಂದ ಡೊಂಬಯ್ಯ ಅವರು ಕಾಯಿ ಕೀಳುತ್ತಿದ್ದಾಗ ಆಕಸ್ಮಿಕವಾಗಿ ಜಾರಿ ಬಿದ್ದಿದ್ದಾರೆ. ಡೊಂಬಯ್ಯ ಅವರು ಬೀಳುವುದನ್ನು ಕಂಡ ಮಾಲಕ ಮುಹಮ್ಮದ್ ಹಾಗೂ ಅಶ್ರಫ್ ಬಿ.ಎಂ.ಟಿ ಅವರು ಮರದ ಬುಡಕ್ಕೆ ಬಂದು ಹಿಡಿಯಲು ಯತ್ನಿಸಿದ್ದಾರೆ. ಪರಿಣಾಮ ಡೊಂಬಯ್ಯ ಅವರು ಮುಹಮ್ಮದ್ ಅವರ ಮೇಲೆ ಬಿದ್ದಿದ್ದರಿಂದ ಇಬ್ಬರ ತಲೆ, ಕೈ ಕಾಲು ಸೊಂಟಕ್ಕೆ ಗಾಯಗಳಾಗಿವೆ.  ಗಾಯಾಳುಗಳಿಬ್ಬರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News