ಸಿದ್ದರಾಮಯ್ಯ ಚುನಾವಣಾ ರಾಜಕೀಯ ನಿವೃತ್ತಿಗೆ ಜನರು ಬಿಡುವುದಿಲ್ಲ: ಸಚಿವ ಝಮೀರ್ ಅಹ್ಮದ್

Update: 2018-10-18 08:24 GMT

ಮಂಗಳೂರು, ಅ. 18: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ರಾಜಕೀಯ ನಿವೃತ್ತಿ ಬಗ್ಗೆ ನೀಡಿದ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಸಚಿವ ಝಮೀರ್ ಅಹ್ಮದ್ ಸಕ್ರಿಯ ರಾಜಕಾರಣಿಗಳನ್ನು ಅಭಿಮಾನಿಗಳು ಅಷ್ಟು ಸುಲಭದಲ್ಲಿ ರಾಜಕೀಯದಿಂದ ನಿವೃತ್ತಿಯಾಗಲು ಬಿಡುವುದಿಲ್ಲ. ಸಿದ್ದರಾಮಯ್ಯ ರಾಜಕಾರಣದಲ್ಲಿರಬೇಕು. ಅವರು ನಿವೃತ್ತಿ ಘೋಷಿಸಿದರೂ ಕೂಡಾ ಜನರು ಸುಮ್ಮನಿರಲು ಬಿಡಲಾರರು ಎಂದರು.

ಕೇಂದ್ರ ಸಚಿವ ಎಂ.ಜೆ. ಅಕ್ಬರ್ ರಾಜೀನಾಮೆಯ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಝಮೀರ್ ಅಹ್ಮದ್ ಖಾನ್, ಅವರು ಆರೋಪ ಕೇಳಿ ಬಂದ ತಕ್ಷಣವೇ ರಾಜೀನಾಮೆ ನೀಡಬೇಕಿತ್ತು. ಜನರಿಂದ ಛೀಮಾರಿ ಹಾಕಿದ ಬಳಿಕ ರಾಜೀನಾಮೆ ನೀಡುವುದರಲ್ಲಿ ಅರ್ಥವಿಲ್ಲ ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News