​ಅ.19: ದಸರಾ ಪ್ರಯುಕ್ತ ಸಾಧಕರಿಗೆ ಸನ್ಮಾನ

Update: 2018-10-18 11:38 GMT

ಮಂಗಳೂರು, ಅ.18: ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರು, ಉಪ ಮಹಾಪೌರರು, ಸದಸ್ಯರು, ಆಯುಕ್ತರು ಹಾಗೂ ಸಿಬ್ಬಂದಿ ವರ್ಗದ ಸಹಯೋಗದೊಂದಿಗೆ ಮಂಗಳೂರು ದಸರಾ ಪ್ರಯುಕ್ತ ಅ.19ರಂದು ನಗರ ಪಾಲಿಕೆಯ ಮುಂಭಾಗ ನಿರ್ಮಿಸಿರುವ ವೇದಿಕೆಯಲ್ಲಿ ಸಾಧಕರುಗಳಿಗೆ ಸನ್ಮಾನ ಹಾಗೂ ‘ಸುರ್ ಸಂಗಮ್ ಆರ್ಕೆಸ್ಟ್ರಾ’ ಕಾರ್ಯಕ್ರಮ ಆಯೋಜಿಸಲಾಗಿದೆ.

ಸಚಿವ ಯು.ಟಿ. ಖಾದರ್ ಸಹಿತ ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ಮೇಯರ್, ಉಪಮೇಯರ್, ಮುಖ್ಯ ಸಚೇತಕರು, ಮನಪಾ ವಿಪಕ್ಷ ನಾಯಕರು, ವಿವಿಧ ಸಮಿತಿಗಳ ಅಧ್ಯಕ್ಷರಲ್ಲದೆಸಾಮಾಜಿಕ, ಶೈಕ್ಷಣಿಕ, ಕ್ರೀಡೆ, ದೇಶಸೇವೆ, ಮನಪಾದ ದಕ್ಷ ಅಧಿಕಾರಿಗಳನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದು ಸಂಘಟಕರು ಪ್ರಕಟೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News