ಸೀತಂಗೋಳಿಯಲ್ಲಿ ರಕ್ತದಾನ ಶಿಬಿರ

Update: 2018-10-18 15:06 GMT

ಕಾಸರಗೋಡು, ಅ.18: ಜನರಕ್ಷಾ ಬ್ಲಡ್ ಡೋನರ್ಸ್ ಕಾಸರಗೋಡು, ಬ್ಲಡ್ ಡೋನರ್ಸ್ ಮಂಗಳೂರು, ಮಂಗಳೂರು ಲ್ಯಾಬ್, ಯೂತ್ ಲೀಗ್ ಪುತ್ತಿಗೆ ಪಂಚಾಯತ್ ಇದರ ವತಿಯಿಂದ ಹಾಗೂ ಯೆನೆಪೊಯ ದೇರಳಕಟ್ಟೆ ಇದರ ಸಹಯೋಗದಲ್ಲಿ ಇತ್ತೀಚೆಗೆ ಸೀತಂಗೊಳಿಯಲ್ಲಿ ರಕ್ತದಾನ ಶಿಬಿರವು ಬಹಳ ಯಶಸ್ವಿಯಾಗಿ ಜರುಗಿತು.

ರಕ್ತದಾನ ಶಿಬಿರವನ್ನು ರಾಷ್ಟ್ರೀಯ ಕರಾಟೆ ಚಾಂಪಿಯನ್ ಅಶ್ರಫ್ ಕಾಸರಗೋಡು ರಕ್ತದಾನ ಮಾಡುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಇಸ್ಮಾಯಿಲ್ ಹಾಜಿ ಕಣ್ಣೂರು, ಅಬ್ದುಲ್ಲಾ ಮುಕ್ಕರಿಕಂಡಂ, ಈ ಕೆ ಮುಹಮ್ಮದ್ ಕುಂಞಿ, ರಫೀಕ್ ಕಣ್ಣೂರು, ರಝಾಕ್ ಕೋಡಿ, ರಫೀಕ್ ಉರ್ಮಿ, ಹನೀಫ್ ಸೀತಂಗೊಳಿ, ಮುಸ್ತಾಫಾ ಸೀತಂಗೋಳಿ ಉಪಸ್ಥಿತರಿದ್ದರು.

ಕರುಣಾಕರನ್, ಅಬ್ದುಲ್ಲಾ ಬದ್ರಿಯಾ ನಗರ, ಅಬ್ದುಲ್ಲಾ ಎಕೆ ಕಡಂಬಲ, ಇಬ್ರಾಹಿಂ ಪೆರ್ವಡ್, ಮೋಯ್ದು ಸೀತಂಗೋಳಿ, ಸಲಾಮ್ ಚೊಂಬುಗುಡ್ಡೆ, ಮುನೀರ್ ಚೊಂಬುಗುಡ್ಡೆ ಶಿಬಿರದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News