ಮಂಗಳೂರು: ದಸರಾದಲ್ಲಿ ಸಚಿವೆ ಜಯಮಾಲ
Update: 2018-10-18 17:20 GMT
ಮಂಗಳೂರು, ಅ. 18: ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ದಸರಾ ಕಾರ್ಯಕ್ರಮದಲ್ಲಿ ಸಚಿವೆ ಡಾ.ಜಯಮಾಲ ಅವರು ಭಾಗವಹಿಸಿದರು.
ದೇವಸ್ಥಾನದ ವತಿಯಿಂದ ಆರಂಭಿಸಲಾದ ಆರೋಗ್ಯ ಯೋಜನೆಗೆ ಸಚಿವೆ ಚಾಲನೆ ನೀಡಿ ಅರ್ಹ ಫಲಾನುಭವಿಗಳಿಗೆ ಆರೋಗ್ಯ ಕಾರ್ಡ್ ವಿತರಣೆ ಮಾಡಿದರು.
ಮಾಜಿ ಸಚಿವರಾದ ರಮಾನಾಥ ರೈ, ವಿನಯ ಕುಮಾರ ಸೊರಕೆ, ಮಾಜಿ ಶಾಸಕ ಜೆ.ಆರ್. ಲೋಬೊ, ನಟಿ, ನಿರೂಪಕಿ ಅನುಶ್ರೀ, ಕೆ.ಪಿ.ಸಿ.ಸಿ. ಪದಾಧಿ ಕಾರಿಗಳಾದ ರಾಜಶೇಖರ ಕೊಟ್ಯಾನ್, ರಕ್ಷಿತ್ ಸುವರ್ಣ, ದೇವಾಲಯದ ಪದಾಧಿಕಾರಿಗಳು ಭಾಗವಹಿಸಿದ್ದರು.