ಮಂಗಳಾದೇವಿಯಲ್ಲಿ ವಿಜಯ ದಶಮಿಯ ರಥೋತ್ಸವದ ಸಡಗರ

Update: 2018-10-19 17:13 GMT

ಮಂಗಳೂರು, ಅ.19: ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಅ.10ರಿಂದ ನವರಾತ್ರಿ ಉತ್ಸವ ವಿವಿಧ ಕಾರ್ಯಕ್ರಮಗಳೋಂದಿಗೆ ಆರಂಭಗೊಂಡಿದ್ದು ಮಂಗಳಾದೇವಿಯಲ್ಲಿ ವಿಜಯ ದಶಮಿಯ ಹಗಲು ರಥೋತ್ಸವ ಇಂದು ಮಾದ್ಯಹ್ನ ನಡೆಯಿತು ಮತ್ತು ಶುಕ್ರವಾರ ರಾತ್ರಿ ನಡೆಯುವ ಮಂಗಳಾದೇವಿಯ ವಿಜಯದಶಮಿ ರಥೋತ್ಸವಕ್ಕೆ ಅಪಾರ ಜನಸ್ತೋಮ ಮಂಗಳಾದೇವಿಯಲ್ಲಿ ಸೇರಿದೆ.

ಶನಿವಾರ ಮಂಗಳಾದೇವಿ ನವಾರಾತ್ರಿ ಮಹೋತ್ಸವದ ಸಮಾರೋಪ ಸಮಾರಂಭ ಶನಿವಾರ ಸಂಜೆ 6ಗಂಟೆಗೆ ಮಂಗಳಾದೇವಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಶಾಸಕ ವೇದವ್ಯಾಸ ಕಾಮತ್, ಐವನ್ ಡಿ ಸೋಜ, ಮಾಜಿ ಶಾಸಕ ಜೆ.ಆರ್. ಲೋಬೊ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಮೊದಲಾದವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಶನಿವಾರ ದೇವರ ಅವಭೃತ ಮಂಗಳ ಸ್ನಾನ ನಡೆಯಲಿದೆ. ಅ.21ರಂದು ಮಂಗಳಾದೆವಿಯಲ್ಲಿ ಸತ್ಯನಾರಾಯಣ ಪೂಜೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News